ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ದುರಂತಗಳು ಹೆಚ್ಚುತ್ತಿವೆ. ಡೈಲಿ ಫಾರ್ಮ್ ಒಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು ಇಪ್ಪತ್ತು ಹಸುಗಳು ಸುಟ್ಟು ಕರಕಲಾದ ಭೀಕರ ದುರ್ಘಟನೆ ಜರುಗಿದೆ. ಬೆಂಕಿ ತಗುಲಿರುವುದು ಬೆಳಕಿಗೆ ಬಂದ ತಕ್ಷಣ ಮಧ್ಯಾಹ್ನ 1.25 ರ ಸುಮಾರಿಗೆ ರೋಹಿಣಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್ನಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲು ಆರಂಭಿಸಿದೆವು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಏಳು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ ಎಂದು ವರದಿಯಾಗಿದೆ.
ಈ ಅಗ್ನಿ ದುರಂತಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಕಳೆದ ತಿಂಗಳು ದೆಹಲಿಯ ಬಳಿಯ ಗಾಜಿಯಾಬಾದ್ನ ಇಂದಿರಾಪುರಂನ ಹಳ್ಳಿಯೊಂದರಲ್ಲಿ, ಡಂಪ್ಯಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಗೋಶಾಲೆಗೆ ಬೆಂಕಿ ಹಚ್ಚಿದ ನಂತರ ಮೂವತ್ತೆಂಟು ಹಸುಗಳು ಸಾವನ್ನಪ್ಪಿದ್ದವು. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸುಮಾರು 150 ಹಸುಗಳಿದ್ದವು.
ದೆಹಲಿಯಲ್ಲಿ ಪದೇ ಪದೇ ಭೀಕರ ಬೆಂಕಿ ದುರಂತಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಈ ಘಟನೆಗಳ ಹಿಂದಿನ ಕಾರಣ ಸೂಕ್ತ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.