News Karnataka Kannada
Thursday, May 09 2024
ದೆಹಲಿ

ಜಾಲತಾಣದಲ್ಲಿ ಪ್ರತ್ಯಕ್ಷರಾಗಿ ನಾನು ಸತ್ತಿಲ್ಲ ಎಂದ ನಿಶಾ ದಹಿಯಾ

Nisha Dahiya
Photo Credit :

ಹರಿಯಾಣ: ಹರಿಯಾಣದ ಅಂತಾರಾಷ್ಟ್ರೀಯ ಮಟ್ಟದ ಕುಸ್ತೀಪಟು ನಿಶಾ ದಹಿಯಾ ಹಾಗೂ ಅವರ ಕುಟುಂಬದ ಮೇಲೆ ಎರಡು ದಿನಗಳ ಹಿಂದೆ ಭಯಾನಕ ಗುಂಡಿನ ದಾಳಿ ನಡೆದಿತ್ತು. ಈ ಸಮಯದಲ್ಲಿ ನಿಶಾ ಮತ್ತು ಸಹೋದರ ಮೃತಪಟ್ಟಿದ್ದರೆ, ಕುಟುಂಬಸ್ಥರು ಗಂಭೀರವಾಗಿ ಗಾಯಗೊಂಡಿದ್ದರು.

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಹತ್ಯೆಯಾಗಿರುವ ನಿಶಾ ಅವರ ಫೋಟೋ ಸಹಿತ ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಆದರೆ ಇದೀಗ ನಿಶಾ ದಹಿಯಾ ಜಾಲತಾಣದಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದ್ದಾರೆ. ನಿಶಾ ದಹಿಯಾ ಗುಂಡಿನ ದಾಳಿಯಲ್ಲಿ ಸತ್ತಿದ್ದು ನಿಜ. ಆಕೆ ರಾಷ್ಟ್ರೀಯ ಮಟ್ಟದ ಕುಸ್ತಿ ಪಟು ಕೂಡ ಹೌದು. ಆದರೆ ಆಕೆ ನಾನಲ್ಲ ಎಂದಿದ್ದಾರೆ!

ಇದರಿಂದ ಜನರು ಗಲಿಬಿಲಿಗೊಂಡಿದ್ದಂತೂ ನಿಜ. ಅಷ್ಟಕ್ಕೂ ಆಗಿರುವುದು ಏನೆಂದರೆ ಹರಿಯಾಣದಲ್ಲಿ ಇಬ್ಬರು ನಿಶಾ ದಹಿಯಾ ಇದ್ದು, ಇಬ್ಬರೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳೇ ಆಗಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಬದುಕಿರುವ ನಿಶಾ ದಹಿಯಾ ಅವರ ಫೋಟೋಗಳನ್ನು ಹಾಕಿ ಅವರ ಹತ್ಯೆ ಎಂದು ಬರೆಯಲಾಗಿತ್ತು.

ಅದಕ್ಕೆ ಅವರು, ‘ಪ್ಲೀಸ್‌ ಈವಿಷಯ ನಂಬಿ, ಸರಿಯಾಗಿ ಕೇಳಿ. ನನ್ನ ಮೇಲೆ ಗುಂಡಿನ ದಾಳಿ ಆಗಿಲ್ಲ. ನನ್ನ ಕುಟುಂಬದ ಜತೆ ಸುರಕ್ಷಿತವಾಗಿದ್ದೇನೆ. ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕಾಗಿ ಸದ್ಯ ಗೊಂಡಾಕ್ಕೆ ಬಂದಿದ್ದೇನೆ. ಗುಂಡಿನಲ್ಲಿ ಮೃತಪಟ್ಟಿದ್ದು, ಯು-23 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದವರು. ಅವರು ನಾನಲ್ಲ. ಇಬ್ಬರ ಹೆಸರೂ ಒಂದೇ ಆಗಿದ್ದ ಕಾರಣ ಈ ಗೊಂದವಾಗಿದೆ. ಅದ್ದರಿಂದ ಸತ್ತಿದ್ದು ನಾನಲ್ಲ’ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು