ನವದೆಹಲಿ: ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ವಿವಾದಾತ್ಮಕ ಹೇಳಿಕೆಗಳು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಭಾರತಕ್ಕೆ ಹಿನ್ನಡೆಯನ್ನುಂಟು ಮಾಡಿದೆ. ಇದರ ಬೆನ್ನಲ್ಲೇ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿರುವ ಹ್ಯಾಶ್ಟ್ಯಾಗ್ಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗಿವೆ.
ಬಿಜೆಪಿ ಪಕ್ಷದ ವಕ್ತಾರರಾದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳು “ಪ್ರತಿ ಮುಸ್ಲಿಮರ ವಿರುದ್ಧದ ಯುದ್ಧ” ಎಂದು ಓಮನ್ನ ಗ್ರಾಂಡ್ ಮುಫ್ತಿ ಶೇಖ್ ಅಲ್-ಖಲೀಲಿ ಟ್ವೀಟ್ ಮಾಡಿದ್ದಾರೆ.
ವರದಿಯ ಪ್ರಕಾರ, ಸೌದಿ ಅರೇಬಿಯಾ, ಕುವೈತ್ ಮತ್ತು ಬಹ್ರೇನ್ನಂತಹ ಗಲ್ಫ್ ರಾಷ್ಟ್ರಗಳ ಅನೇಕ ಸೂಪರ್ ಸ್ಟೋರ್ಗಳು ಭಾರತೀಯ ಉತ್ಪನ್ನಗಳನ್ನು ತಮ್ಮ ಕಪಾಟಿನಿಂದ ತೆಗೆದುಹಾಕುತ್ತವೆ ಎಂದು ಹೇಳಿದ್ದಾರೆ.
ಕತಾರ್ ಮತ್ತು ಕುವೈತ್ ಭಾನುವಾರ ಭಾರತದ ರಾಯಭಾರಿಗಳನ್ನು ಕರೆಸಿ, ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ಗಲ್ಫ್ ರಾಷ್ಟ್ರಗಳು “ನಿರಾಕರಣೆ ಮತ್ತು ಖಂಡನೆ” ಎಂದು ಕರೆಯುವ ಪ್ರತಿಭಟನೆಯ ಟಿಪ್ಪಣಿಗಳನ್ನು ಅವರಿಗೆ ಹಸ್ತಾಂತರಿಸಿದೆ.