ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ 4 ಲಕ್ಷ ರೂ. ಪರಿಹಾರಕ್ಕೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಆನ್ ಲೈನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜನರು ನೋವು, ನಷ್ಟದಲ್ಲಿ ನರಳುತ್ತಿರುವಾಗ ಸರ್ಕಾರ ನಿದ್ರೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
‘ಸ್ಪೀಕ್ ಆಫ್ ಫಾರ್ ಕೋವಿಡ್ ನ್ಯಾಯ ಹ್ಯಾಷ್ ಟ್ಯಾಗ್ ನಲ್ಲಿ’ ಅಭಿಯಾನಕ್ಕೆ ಚಾಲನೆ ನೀಡಿರುವ ರಾಹುಲ್ ಗಾಂಧಿ, ಜನರು ನೋವು, ನಷ್ಟದಲ್ಲಿರುವಾಗ, ಭಾರತ ಸರ್ಕಾರ ನಿದ್ರೆ ಮಾಡುತ್ತಿದೆ. ಅವರನ್ನು ಎಬ್ಬಿಸೋಣ ಎಂದು ಹೇಳಿದ್ದಾರೆ.