News Karnataka Kannada
Thursday, May 02 2024
ದೆಹಲಿ

ಕೃಷಿ ಮಸೂದೆ ಸಮರ್ಥಿಸಿಕೊಂಡ ಪ್ರಧಾನಿ ಮೋದಿ

Modi Main 1 Newsk 6981522169
Photo Credit :
ನವದೆಹಲಿ: ಪ್ರತಿಪಕ್ಷಗಳು ತಮ್ಮ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಟೀಕಿಸುತ್ತಿರುವುದು “ಬೌದ್ಧಿಕ ಅಪ್ರಾಮಾಣಿಕತೆ” ಮತ್ತು “ರಾಜಕೀಯ ವಂಚನೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ದಶಕಗಳ ಹಿಂದೆಯೇ ದೇಶದ ಜನರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಕಲ್ಪಿಸಲು ಕಠಿಣ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕೃಷಿ ಕಾನೂನುಗಳನ್ನು ದೃಢವಾಗಿ ಸಮರ್ಥಿಸಿಕೊಂಡ ಪ್ರಧಾನಿ ಮೋದಿ, ಒಂದು ರಾಜಕೀಯ ಪಕ್ಷವು ತಾನು ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾಗದಿದ್ದರೆ ಅದು ವಂಚನೆಯಾಗಲಿದೆ. ಆದರೆ “ನಿರ್ದಿಷ್ಟವಾಗಿ ಅನಪೇಕ್ಷಿತ” ಮತ್ತು “ಅಸಹ್ಯಕರ” ಲಕ್ಷಣವೆಂದರೆ ಕೆಲ ಪಕ್ಷಗಳು ಕೃಷಿ ಸುಧಾರಣೆ ಕುರಿತು ಭರವಸೆ ನೀಡಿದ್ದವು. ನಮ್ಮ ಸರ್ಕಾರ ಆ ಸುಧಾರಣೆಗಳನ್ನು ಜಾರಿಗೊಳಿಸಿದರೆ ಆ ಪಕ್ಷಗಳು ಈಗ ಯು-ಟರ್ ಹೊಡೆದು ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುತ್ತಿವೆ ಎಂದು ಹೇಳಿದರು.

ಸಂದರ್ಶನೊಂದರಲ್ಲಿ  ಮಾತನಾಡಿದ ಪ್ರಧಾನಿ, “ಭಾರತದ ಜನರು ಕೆಲವು ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಸೌಲಭ್ಯಗಳು ದಶಕಗಳ ಹಿಂದೆಯೇ ಅವರಿಗೆ ಸಿಗಬೇಕಿತ್ತು. ಆದರೆ ಇನ್ನೂ ಸಿಕ್ಕಲ್ಲ. ಅದಕ್ಕಾಗಿ ಇನ್ನೂ ಕಾಯುವಂತಹ ಪರಿಸ್ಥಿತಿ ಬೇಡ. ಈಗ ನಾವು ಆ ಸೌಲಭ್ಯಗಳನ್ನು ತಲುಪಿಸಲು ದೊಡ್ಡ ಮತ್ತು ಕಠಿಣ ನಿರ್ಧಾರ ಅಗತ್ಯ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು