ಹೊಸದಿಲ್ಲಿ: ಒಮಿಕ್ರಾನ್ ಹಾವಳಿ ಹಿನ್ನೆಲೆಯಲ್ಲಿ “ಅತೀ ಅಪಾಯಕಾರಿ’ ಎಂದು ವರ್ಗೀಕರಿಸಲಾದ ದೇಶಗಳಿಂದ ಬರುವ ಅಥವಾ ಆ ದೇಶಗಳನ್ನು ಹಾದುಬರುವ ವಿಮಾನ ಯಾನಿಗಳು ಭಾರತದಲ್ಲಿ ಇಳಿದೊಡನೆಯೇ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು.
“ಅತೀ ಅಪಾಯಕಾರಿ’ ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುವವರಿಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡಲಾಗುತ್ತದೆ. ಆದರೆ ಅವರ ಮೇಲೆ 14 ದಿನ ನಿಗಾ ಇರಿಸ ಲಾಗುತ್ತದೆ.
ಪರೀಕ್ಷಾ ವರದಿ ಬಾರದೆ ವಿಮಾನ ನಿಲ್ದಾಣದಿಂದ ಹೊರಬರುವಂತಿಲ್ಲ ಅಥವಾ ಇನ್ನೊಂದು ವಿಮಾನ ಏರುವಂತಿಲ್ಲ ಎಂದು ಕೇಂದ್ರ ಸರಕಾರ ಹೊಸ ಮಾರ್ಗದರ್ಶಿ ಬಿಡುಗಡೆ ಮಾಡಿದೆ.
ಇವರಲ್ಲಿ ಶೇ. 5 ಮಂದಿಯನ್ನು ವಿಮಾನ ನಿಲ್ದಾಣದಲ್ಲಿಯೇ ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರ ಹೇಳಿದೆ.