ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಿಂದ ಸ್ಥಳಾಂತರಿಸಲಾದ 242 ಭಾರತೀಯರನ್ನು ಹೊತ್ತ ವಿಶೇಷ ವಿಮಾನ ಶುಕ್ರವಾರ ಪೋಲೆಂಡ್ನಿಂದ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು.
‘ನಾವು ಹೋದ ದಿನವೂ ಆ ನಗರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಭಾರತ ಸರ್ಕಾರ, ರೆಡ್ಕ್ರಾಸ್ ಮತ್ತು ಭಾರತೀಯ ರಾಯಭಾರ ಕಚೇರಿ ನಮಗೆ ಸಾಕಷ್ಟು ಸಹಾಯ ಮಾಡಿದೆ ಮತ್ತು ನಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಹಸಿರು ಕಾರಿಡಾರ್ ಅನ್ನು ನಿರ್ಮಿಸಿದೆ. ನಾನು ಪ್ರಧಾನಿ ಮೋದಿಯವರಿಗೆ ಕೃತಜ್ಞನಾಗಿದ್ದೇನೆ.’ ಎಂದು ಸುಮಿ ಸ್ಟೇಟ್ ಯೂನಿವರ್ಸಿಟಿಯ ವಿದ್ಯಾರ್ಥಿ ಹರ್ದೀಪ್ ಹೇಳಿದರು.
ಸುಮಿಯ ಮತ್ತೋರ್ವ ವಿದ್ಯಾರ್ಥಿನಿ ಪ್ರೇರಣಾ ಚೌಧರಿ, ‘ ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಶೀಘ್ರದಲ್ಲೇ ಸ್ಥಳಾಂತರಿಸುತ್ತದೆ ಎಂಬ ನಂಬಿಕೆ ನಮಗಿತ್ತು. ನಾವು ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ (ತೆರವು ಸಮಯದಲ್ಲಿ), ನಮಗೆ ನೇರ ಬಸ್ಸುಗಳು, ರೈಲುಗಳು ಸಿಕ್ಕಿವೆ. ನಮ್ಮನ್ನು ಸರಿಯಾಗಿ ಸ್ಥಳಾಂತರಿಸಲಾಗಿದೆ. . ನಾವು ಗಡಿಯಲ್ಲಿ ನಿಲ್ಲಬೇಕಾಗಿಲ್ಲ, ಎಲ್ಲಾ ವ್ಯವಸ್ಥೆಗಳನ್ನು ಚೆನ್ನಾಗಿ ಮಾಡಲಾಗಿದೆ.’ಎಂದರು.
ಉಕ್ರೇನ್ನ ಎರಡೂ ಕಡೆ ಹಾಗೂ ರಷ್ಯಾದ ಗಡಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಎನ್ಐ ಈ ಹಿಂದೆ ವರದಿ ಮಾಡಿತ್ತು.