ಹೊಸದಿಲ್ಲಿ: ಇನ್ನೆರಡು ದಿನಗಳಲ್ಲೇ ಮುಂಗಾರು ಮಾರುತ ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜೂ.10-11ರಂದು ಅರುಣಾ ಚಲ ಪ್ರದೇಶದಲ್ಲಿ, ಮುಂದಿನ 5 ದಿನಗಳ ಕಾಲ ಮೇಘಾಲಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂಬ ಮುನ್ನೆಚ್ಚರಿಕೆ ಯನ್ನೂ ಇಲಾಖೆ ನೀಡಿದೆ.
ಈ ನಡುವೆ ದಿಲ್ಲಿ-ಎನ್ಸಿಆರ್ ಮತ್ತು ವಾಯವ್ಯ ಭಾರತದ ಇತರ ಭಾಗಗಳಲ್ಲಿ ಜೂ.15ರ ವರೆಗೂ ಬಿಸಿಲು ಮುಂದುವರಿಯುತ್ತದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.