News Karnataka Kannada
Monday, April 29 2024
ದೆಹಲಿ

ಅಫ್ಘಾನಿಸ್ತಾನ್ ಸರ್ಕಾರದ ಬಗ್ಗೆ ಭಾರತದ ಕಳವಳ

Jai Shankar
Photo Credit :

ನವದೆಹಲಿ: ಅಷ್ಘಾನಿಸ್ತಾನದಲ್ಲಿ ನೂತನವಾಗಿ ರಚನೆಯಾದ ಸರ್ಕಾರದ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತಕ್ಕೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.
ಇದು ನೆರೆಯ ದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಭಾರತ ನೀಡಿದ ಮೊದಲ ಪ್ರತಿಕ್ರಿಯೆಯಾಗಿದ್ದು, ಇದಕ್ಕೆ ಆಸ್ಪ್ರೇಲಿಯಾ ಕೂಡಾ ಧ್ವನಿಗೂಡಿಸಿದೆ.
ಉಭಯ ದೇಶಗಳ ನಡುವಿನ ಮೊದಲ 2+2 ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಜೈಶಂಕರ್‌, ‘ಅಷ್ಘಾನಿಸ್ತಾನದ ಹೊಸ ಸರ್ಕಾರದಲ್ಲಿನ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತ ಕಳವಳ ಹೊಂದಿದೆ ಎಂದರು. ಜೈಶಂಕರ್‌ ಅವರ ಈ ಮಾತಿಗೆ ಆಸ್ಪ್ರೇಲಿಯಾ ವಿದೇಶಾಂಗ ಸಚಿವೆ ಮರೈಸ್‌ ಪೈನೆ ಕೂಡಾ ಧ್ವನಿಗೂಡಿಸಿ, ‘ಅಷ್ಘಾನಿಸ್ತಾನದಲ್ಲಿನ ಮಹಿಳೆಯರ ಸ್ಥಿತಿಗತಿ ಬಗ್ಗೆ ನಾವು ಕೂಡಾ ಕಳವಳ ಹೊಂದಿದ್ದೇವೆ’ ಎಂದು ಹೇಳಿದ್ದರು.ಅಷ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರ ಪದಚ್ಯುತವಾದ ಬೆನ್ನಲ್ಲೇ, ಮಹಿಳೆಯರನ್ನು ಹಲವು ಹುದ್ದೆಗಳಿಂದ ತೆಗೆದು ಹಾಕಲಾಗಿತ್ತು. ಸಾರ್ವಜನಿಕ ಸ್ಥಳಗಳಿಂದ ಅವರ ಫೋಟೋಗಳನ್ನು ತೆಗೆದುಹಾಕಲಾಗಿತ್ತು. ಶಾಲಾ-ಕಾಲೇಜುಗಳಲ್ಲಿ ಸಹ ಶಿಕ್ಷಣಕ್ಕೆ ಬ್ರೇಕ್‌ ಹಾಕಲಾಗಿತ್ತು. ಜೊತೆಗೆ ಇತ್ತೀಚೆಗೆ ರಚನೆಯಾದ ಹಂಗಾಮಿ ಸರ್ಕಾರದಲ್ಲಿ ಯಾವುದೇ ಮಹಿಳೆಯರಿಗೂ ಸ್ಥಾನ ಕಲ್ಪಿಸಿರಲಿಲ್ಲ. ಅದರ ಬೆನ್ನಲ್ಲೇ ಭಾರತ ಮತ್ತು ಆಸ್ಪ್ರೇಲಿಯಾ ದೇಶಗಳು ಅಷ್ಘಾನಿಸ್ತಾನದಲ್ಲಿ ಮತ್ತು ಅಲ್ಲಿನ ಸರ್ಕಾರದಲ್ಲಿ ಮಹಿಳೆಯರ ಕಡೆಗಣನೆ ಬಗ್ಗೆ ಪರೋಕ್ಷವಾಗಿ ಕಳವಳ ವ್ಯಕ್ತಪಡಿಸಿವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು