ಕಚ್: ಬಿಪರ್ಜೋಯ್ ಚಂಡಮಾರುತವು ಗುರುವಾರ (ಜೂನ್ 15ರಂದು) ಗುಜರಾತ್ಗೆ ಅಪ್ಪಳಿಸುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೌರಾಷ್ಟ್ರ-ಕಚ್ ಪ್ರದೇಶಗಳಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ.
ಅಲ್ಲದೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಕಟ್ಟೆಚ್ಚರ ನೀಡಿದೆ. ಈ ಹಿನ್ನಲೆಯಲ್ಲಿ ಪಶ್ಚಿಮ ರೈಲ್ವೆಯು ಮುನ್ನೆಚ್ಚರಿಕೆ ಕ್ರಮವಾಗಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಹಾದುಹೋಗುವ ಕನಿಷ್ಠ 67 ರೈಲು ಸಂಚಾರ ರದ್ದುಗೊಳಿಸಲು ನಿರ್ಧರಿಸಿದೆ.
ಓಖಾ-ರಾಜ್ಕೋಟ್ ಅನ್ರಿಸರ್ವ್ಡ್ ಸ್ಪೆಷಲ್, ವೆರಾವಲ್-ಓಖಾ ಎಕ್ಸ್ಪ್ರೆಸ್, ರಾಜ್ಕೋಟ್-ಓಖಾ ಅನ್ರಿಸರ್ವ್ಡ್ ಸ್ಪೆಷಲ್, ಭಾವನಗರ ಟರ್ಮಿನಸ್-ಓಖಾ ಎಕ್ಸ್ಪ್ರೆಸ್, ಅಹಮದಾಬಾದ್-ವೆರಾವಲ್ ಎಕ್ಸ್ಪ್ರೆಸ್, ಪೋರಬಂದರ್-ವೆರಾವಲ್ ಎಕ್ಸ್ಪ್ರೆಸ್ ಸೇರಿವೆ.
ರದ್ದುಗೊಂಡಿರುವ ರೈಲು ಸಂಚಾರಕ್ಕೆ ಪರಿಹಾರವಾಗಿ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ. ಭಾರತೀಯ ಕೋಸ್ಟ್ ಗಾರ್ಡ್ ಕೂಡ ಗುಜರಾತ್ ಕರಾವಳಿಯಲ್ಲಿ ಪರಿಹಾರ ಕಾರ್ಯಕ್ಕೆ ಸಜ್ಜಾಗಿದೆ.
ಪ್ರಸ್ತುತ ಬಿಪರ್ಜಾಯ್ ಪೋರಬಂದರ್ ಮತ್ತು ದೇವಭೂಮಿ ದ್ವಾರಕಾದ ನೈಋತ್ಯದಲ್ಲಿ ಕೇಂದ್ರೀಕೃತವಾಗಿದೆ. ಇದು ಗುರುವಾರ ಸಂಜೆ ತೀವ್ರತೆ ಪಡೆದುಕೊಂಡು ಜಖೌ ಬಂದರಿನ ಬಳಿ ದಾಟುವ ನಿರೀಕ್ಷೆಯಿದೆ.