ಚಂಡೀಗಢ: ಪರಾರಿಯಾಗಿರುವ ಖಲಿಸ್ತಾನಿ ಪರ ನಾಯಕ ಅಮೃತಪಾಲ್ ಸಿಂಗ್ ಮತ್ತು ಅವರ ಆಪ್ತ ಪಾಪಲ್ಪ್ರೀತ್ ಸಿಂಗ್ ಮತ್ತೊಮ್ಮೆ ಪಂಜಾಬ್ ಪೊಲೀಸರಿಗೆ ಮತ್ತೊಮ್ಮೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಹೋಶಿಯಾರ್ಪುರ ಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಅಮೃತಪಾಲ್ ಸೇರಿದಂತೆ ಮೂರು ಜನರಿದ್ದ ಇನ್ನೋವಾ ವಾಹನವನ್ನು ಮಂಗಳವಾರ ರಾತ್ರಿ ಚೆಕ್ಪಾಯಿಂಟ್ನಲ್ಲಿ ಪೊಲೀಸರು ತಡೆದರು. ಆದರೆ ಅವರು ಕತ್ತಲೆಯಲ್ಲಿ ಪಲಾಯನ ಮಾಡುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿಯೊಬ್ಬರು ಐಎಎನ್ಎಸ್ಗೆ ತಿಳಿಸಿದ್ದಾರೆ.
ಪೊಲೀಸರು ಫಗ್ವಾರಾದಿಂದ ಕಾರನ್ನು ಬೆನ್ನಟ್ಟಿದ್ದರು. ಆದರೆ ಖಾಲಿಸ್ತಾನಿ ಉಗ್ರ ಸಿಂಗ್ ಕಾರನ್ನು ಫಗ್ವಾರಾ-ಹೊಶಿಯಾರ್ಪುರ ರಸ್ತೆಯ ಗುರುದ್ವಾರ ಭಾಯಿ ಚಂಚಲ್ ಸಿಂಗ್ ಬಳಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.
ಹೋಶಿಯಾರ್ಪುರ ಜಿಲ್ಲೆಯ ಗ್ರಾಮಗಳನ್ನು ಪೊಲೀಸರು ಸುತ್ತುವರಿದಿದ್ದು, ಮನೆ ಮನೆಗೆ ತೆರಳಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಶಿಯಾರ್ಪುರ ಮತ್ತು ಜಲಂಧರ್ ಜಿಲ್ಲೆಗಳಲ್ಲಿ ಅಮೃತಪಾಲ್ನ ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಆತನ ಇರುವಿಕೆ ಬಗ್ಗೆ ಮಾಹಿತಿ ಪಡೆದಿದ್ದರು.