ಛತ್ತೀಸ್ಗಢ: ಖಾಸಗಿ ಬಸ್ವೊಂದು ದುರ್ಗ್ ಜಿಲ್ಲೆಯಲ್ಲಿ ‘ಮುರುಮ್’ ಮಣ್ಣಿನ ಹೊಂಡಕ್ಕೆ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ
ಈ ಘಟನೆಯಲ್ಲಿ ಸುಮಾರು 11 ಜನರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿಸ್ಟಿಲರಿ ಕಂಪನಿಯ 30ಕ್ಕೂ ಹೆಚ್ಚು ಉದ್ಯೋಗಿಗಳು ಬಸ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಖಾಪ್ರಿ ಗ್ರಾಮದ ಬಳಿ ಬಸ್ ಸಂಚರಿಸುವ ವೇಳೆ ಬಸ್ ಸ್ಕಿಡ್ ಆದ ಕಾರಣ 40 ಅಡಿ ಆಳದ ‘ಮುರುಮ್’ ಗಣಿಯಲ್ಲಿ ಹೋಗಿ ಬಿದ್ದಿದೆ. ಎಂದು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಟೀಲ್ ಹೇಳಿದ್ದಾರೆ.
‘ಮುರುಮ್’ ವಿಶೇಷ ಮಣ್ಣಾಗಿದ್ದು, ಅದನ್ನು ನಿರ್ಮಾಣ ಕೆಲಸಕ್ಕೆ ಬಳಸುತ್ತಾರೆ. ಘಟನೆ ನಡೆದಂತೆ ಪೊಲೀಸ್ ತಂಡಕ್ಕೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ.