News Karnataka Kannada
Thursday, May 02 2024
ಛತ್ತೀಸಗಢ

40 ಅಡಿ ಆಳದ ಮಣ್ಣಿನ ಹೊಂಡಕ್ಕೆ ಬಿದ್ದ ಬಸ್: 11 ಜನರ ದುರ್ಮರಣ

ಖಾಸಗಿ ಬಸ್​ವೊಂದು ದುರ್ಗ್​ ಜಿಲ್ಲೆಯಲ್ಲಿ ‘ಮುರುಮ್​’ ಮಣ್ಣಿನ ಹೊಂಡಕ್ಕೆ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ
Photo Credit : NewsKarnataka

ಛತ್ತೀಸ್​ಗಢ: ಖಾಸಗಿ ಬಸ್​ವೊಂದು ದುರ್ಗ್​ ಜಿಲ್ಲೆಯಲ್ಲಿ ‘ಮುರುಮ್​’ ಮಣ್ಣಿನ ಹೊಂಡಕ್ಕೆ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ

ಈ ಘಟನೆಯಲ್ಲಿ ಸುಮಾರು 11 ಜನರು ಸಾವನ್ನಪ್ಪಿ, 20 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಸ್ಟಿಲರಿ ಕಂಪನಿಯ 30ಕ್ಕೂ ಹೆಚ್ಚು ಉದ್ಯೋಗಿಗಳು ಬಸ್​ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಖಾಪ್ರಿ ಗ್ರಾಮದ ಬಳಿ ಬಸ್​ ಸಂಚರಿಸುವ ವೇಳೆ  ಬಸ್​ ಸ್ಕಿಡ್​ ಆದ ಕಾರಣ 40 ಅಡಿ ಆಳದ ‘ಮುರುಮ್​​’ ಗಣಿಯಲ್ಲಿ ಹೋಗಿ ಬಿದ್ದಿದೆ. ಎಂದು ಪೊಲೀಸ್​ ವರಿಷ್ಠಾಧಿಕಾರಿ ಹರೀಶ್​ ಪಾಟೀಲ್​ ಹೇಳಿದ್ದಾರೆ.

‘ಮುರುಮ್’ ವಿಶೇಷ ಮಣ್ಣಾಗಿದ್ದು, ಅದನ್ನು ನಿರ್ಮಾಣ ಕೆಲಸಕ್ಕೆ ಬಳಸುತ್ತಾರೆ. ಘಟನೆ ನಡೆದಂತೆ ಪೊಲೀಸ್​ ತಂಡಕ್ಕೆ​ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಚರಣೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು