ಪಾಟ್ನಾ: ಆರ್ಜೆಡಿ ತನ್ನ 27 ನೇಯ ಸ್ಥಾಪನಾ ದಿನವನ್ನು ಬುಧವಾರ ಆಚರಿಸಿತು. ಈ ವೇಳೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಪಕ್ಷದ ನಾಯಕ ಕೇದಾರ್ ಯಾದವ್ ಸಂಭ್ರಮವನ್ನಾಚರಿಸಲು ಗೂಳಿಯ ಮೇಲೇರಿ ಕೇಕ್ ಕತ್ತರಿಸಲು ಮುಂದಾದರು.
ಪಕ್ಷದ ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟುತ್ತಿದ್ದಂತೆ ಗೂಳಿ ಕೇದಾರ್ ಯಾದವ್ ಅವರನ್ನು ಕೆಳಕ್ಕೆಸೆದು ಅವರ ಮೇಲೆ ದಾಳಿಗೆ ಮುಂದಾಯಿತು.
ಈ ವೇಳೆ ಪಕ್ಷದ ಕಾರ್ಯಕರ್ತರು ಅವರನ್ನು ರಕ್ಷಿಸಿ ಸ್ಥಳದಿಂದ ಕರೆದೊಯ್ದರು. ಈ ಹಿಂದೆಯೂ ಕೇದಾರ್ ಹಲವು ಬಾರಿ ಗೂಳಿ ಮೇಲೆ ಮೆರವಣಿಗೆ ನಡೆಸಿದ್ದರು ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಪಕ್ಷದ ಸ್ಥಾಪನಾ ದಿನ ಸಂಭ್ರಮಾಚರಣೆಗೆ ಗೂಳಿಯನ್ನು ಬಲೂನ್ಗಳಿಂದ ಅಲಂಕರಿಸಿ ಸ್ಥಳಕ್ಕೆ ಕರೆತಂದಿದ್ದರು.