ಪಾಟ್ನಾ: ಬಿಹಾರದ ಮಧುಬನಿ ಜಿಲ್ಲೆಯ ಝಂಜರ್ಪುರದಲ್ಲಿ ಜೂನ್ 24ರಂದು ನಿಗದಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ರ್ಯಾಲಿಯನ್ನು ಮುಂದೂಡಲಾಗಿದೆ.
ಇದನ್ನು ದೃಢಪಡಿಸಿದ ಪಕ್ಷದ ರಾಜ್ಯ ಅಧ್ಯಕ್ಷ ಸಾಮ್ರಾಟ್ ಚೌಧರಿ, ರ್ಯಾಲಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಜೂನ್ 29 ರಂದು ಮುಂಗೇರ್ ಲೋಕಸಭಾ ಕ್ಷೇತ್ರದ ಲಖಿಸರಾಯ್ ನಲ್ಲಿ ಅಮಿತ್ ಶಾ ಅವರ ರ್ಯಾಲಿ ನಿಗದಿಯಾಗಿದೆ ಎಂದು ಹೇಳಿದರು.
ನಡ್ಡಾ ಅವರ ರ್ಯಾಲಿಯನ್ನು ಮುಂದೂಡಲು ಕಾರಣ ಇನ್ನೂ ತಿಳಿದು ಬಂದಿಲ್ಲ. ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಮೆಗಾ ಸಭೆಯ ಒಂದು ದಿನದ ನಂತರ ಜೂನ್ 24 ರಂದು ರ್ಯಾಲಿ ನಿಗದಿಯಾಗಿರುವುದರಿಂದ ಸಾರ್ವಜನಿಕವಾಗಿ ಯಾವುದೇ ತಪ್ಪು ಸಂದೇಶವನ್ನು ಹೋಗಲು ಬಿಜೆಪಿ ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.