ಪಾಟ್ನಾ: ಪತ್ರಕರ್ತ ವಿಮಲ್ ಕುಮಾರ್ ಯಾದವ್ ಅವರನ್ನು ಬಿಹಾರದ ಅರಾರಿಯಾ ಜಿಲ್ಲೆಯ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದ ಕೆಲವು ದಿನಗಳ ನಂತರ, ಜಿಲ್ಲೆಯ ವಿಶೇಷ ಕಾರ್ಯಪಡೆ ಮುಖ್ಯ ಶೂಟರ್ ನನ್ನು ಬಂಧಿಸಿದೆ.
“ನಾವು ಸೋಮವಾರ ತಡರಾತ್ರಿ ಅರ್ಜುನ್ ಶರ್ಮಾ ಅವರನ್ನು ಬಂಧಿಸಿದ್ದೇವೆ. ಕೊಲೆ ಮತ್ತು ಕ್ರಿಮಿನಲ್ ಪಿತೂರಿಯ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾವು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ ” ಎಂದು ಅರಾರಿಯಾ ಎಸ್ಪಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.
ಎದೆಯ ಬಲಭಾಗದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 19 ರಂದು ಅರಾರಿಯಾ ಪೊಲೀಸರು ವಿಪಿನ್ ಯಾದವ್, ಭವೇಶ್ ಯಾದವ್, ಆಶಿಶ್ ಯಾದವ್ ಮತ್ತು ಉಮೇಶ್ ಯಾದವ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
ಮೃತನ ತಂದೆ ಹರೇಂದ್ರ ಯಾದವ್ ನೀಡಿದ ಹೇಳಿಕೆಯ ಮೇರೆಗೆ ವಿಮಲ್ ಯಾದವ್ ಅವರ ನೆರೆಹೊರೆಯವರಾದ ಭವೇಶ್ ಮತ್ತು ಆಶಿಶ್ ವಿರುದ್ಧ ಐಪಿಸಿ ಸೆಕ್ಷನ್ 302, 120 ಬಿ ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹರೇಂದ್ರ ಅವರು ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಅವರಲ್ಲಿ ರೂಪೇಶ್ ಯಾದವ್ ಮತ್ತು ಕಾಂತಿ ಯಾದವ್ ಕ್ರಮವಾಗಿ ಸುಪಾಲ್ ಮತ್ತು ಅರಾರಿಯಾ ಜೈಲಿನಲ್ಲಿದ್ದಾರೆ.
ಮೃತ ವಿಮಲ್ ನ ನೆರೆಮನೆಯ ರೂಪೇಶ್, ವಿಮಲ್ ನ ಕಿರಿಯ ಸಹೋದರ ಗಬ್ಬು ಯಾದವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾಲ್ ಜೈಲಿನಿಂದ ಪಿತೂರಿ ನಡೆಸಿದ್ದ.
ಗಬ್ಬು ಯಾದವ್ ಕೊಲೆ ಪ್ರಕರಣದ ಸಾಕ್ಷಿಗಳ ಪಟ್ಟಿಯಿಂದ ತನ್ನ ಹೆಸರನ್ನು ಹಿಂತೆಗೆದುಕೊಳ್ಳದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರೂಪೇಶ್ ವಿಮಲ್ ಗೆ ಬೆದರಿಕೆ ಹಾಕುತ್ತಿದ್ದ.