ಬಿಹಾರ: ಭಾನುವಾರ ಉಂಟಾದ ಸಿಡಿಲಿನಬ್ಬರಕ್ಕೆ ರಾಜ್ಯದಾದ್ಯಂತ 17 ಜನರು ಸಾವನ್ನಪ್ಪಿದ್ದಾರೆ. ಜನರ ಸಾವಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಭಾಗಲ್ಪುರ-3, ವೈಶಾಲಿ-3, ಖಗಾರಿಯಾ- 2, ಕತಿಹಾರ್- 1, ಸಹರ್ಸಾದಲ್ಲಿ- 1, ಮಾಧೇಪುರ- 1, ಬಂಕಾ- 2 ಮತ್ತು ಮುಂಗೇರ್ನಲ್ಲಿ ಒಬ್ಬರು ಸಿಡಿಲಿನ ಹೊಡೆತಕ್ಕೆ ಸಾವನ್ನಪ್ಪಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ. ಮೃತರ ಕುಟುಂಬಕ್ಕೆ 4 ಲಕ್ಷ ರೂ.ಗಳನ್ನು ತಕ್ಷಣವೇ ನೀಡಲಾಗುವುದು ಎಂದು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಪ್ರತಿಕೂಲ ವಾತಾವರಣದಲ್ಲಿ ಸಂಪೂರ್ಣ ಜಾಗರೂಕತೆ ವಹಿಸಲು ಮತ್ತು ಗುಡುಗು ಸಹಿತ ಮಳೆಯ ಕಾರಣದಿಂದ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಸಲಹೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.
आंधी तथा वज्रपात से भागलपुर में 6, वैशाली में 3, खगड़िया में 2, कटिहार में 1, सहरसा में 1, मधेपुरा में 1, बांका में 2 और मुंगेर में 1 व्यक्ति की मृत्यु दुःखद। प्रभावित परिवारों के प्रति गहरी संवेदना है। सभी मृतक के परिजनों को तत्काल 4-4 लाख रू० अनुग्रह अनुदान दिया जाएगा। (1/2)
— Nitish Kumar (@NitishKumar) June 19, 2022