ಬಿಹಾರ: ಬಿಹಾರದ ಗೋಪಾಲ್ ಗಂಜ್ ನಿಂದ ನದಿ ದಾಟುವ ಮೂಲಕ ಕೃಷಿ ಮಾಡಲು ಹೋಗುವ ರೈತರಿಂದ ತುಂಬಿದ ದೋಣಿ ಉರುಳಿಬಿದ್ದಿತು. ದೋಣಿಯಲ್ಲಿ ನದಿ ದಾಟುತ್ತಿದ್ದಂತ ಸಂದರ್ಭದಲ್ಲಿ ದೋಣಿಯೊಂದು ಮುಳುಗಿದ ಕಾರಣ, ದೋಣಿಯಲ್ಲಿದ್ದಂತ 24 ಜನರು ಕಣ್ಮರೆಯಾಗಿರೋ ಭೀಕರ ದುರುಂತ ಸಂಭವಿಸಿದೆ.
ಈ ದುರಂತದಲ್ಲಿ ಮುಳುಗಿ ಸಾವನ್ನಪ್ಪಿದಂತ ಮೂವರು ಶವವಾಗಿ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ.ಅಪಘಾತದಲ್ಲಿ 24 ಜನರು ಮುಳುಗಿದ್ದಾರೆ ಎಂದು ಶಂಕಿಸಲಾಗಿದೆ. ಮೂವರ ಶವಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ.ಮಾಹಿತಿಯ ಪ್ರಕಾರ, ದೋಣಿಯಲ್ಲಿ ಟ್ರ್ಯಾಕ್ಟರ್ ಲೋಡ್ ಮಾಡಿದ ನಂತರ ದೋಣಿಸಿಬ್ಬಂದಿ ಸೇರಿದಂತೆ 24 ಕಾರ್ಮಿಕರು ಕಬ್ಬಿನ ಸಿಪ್ಪೆ ಸುಲಿಯಲು ಹೋಗುತ್ತಿದ್ದರು. ಸಮತೋಲನ ಕಳೆದುಕೊಂಡ ಕಾರಣ ಇದ್ದಕ್ಕಿದ್ದಂತೆ ದೋಣಿ ಉರುಳಿಬಿದ್ದಿತು. ಈ ಮೂಲಕ 21 ಮಂದಿ ಕಣ್ಮರೆಯಾಗಿದ್ದರೇ, ಮೂವರು ಶವವಾಗಿ ಪತ್ತೆಯಾಗಿದ್ದಾರೆ.
ವಿಷಯ ತಿಳಿದು ಎನ್ ಡಿಆರ್ ಎಫ್ ತಂಡವು ಸ್ಥಳಕ್ಕೆ ತಲುಪಿದ್ದು, ಕಾಣೆಯಾದವರಿಗಾಗಿ ಹುಡುಕಾಟವನ್ನು ಪ್ರಾರಂಭಿಸಿದೆ. ಬೆಟ್ಟಿಯಾ-ಗೋಪಾಲ್ ಗಂಜ್ ಗಡಿಯಲ್ಲಿರುವ ಭಗವಾನ್ ಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.