ಮಧ್ಯಪ್ರದೇಶ: ಭೋಪಾಲ್ ನ ವನವಿಹಾರ ರಾಷ್ಟ್ರೀಯ ಉದ್ಯಾನ ಹಾಗು ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿದ್ದ ಭಾರತದ ಅತಿ ಹಿರಿಯ ಗಂಡು ಕರಡಿ ಬಬ್ಲೂ(೩೬) ಶುಕ್ರವಾರ ಮೃತಪಟ್ಟಿದೆ.
ಬಬ್ಲೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಕಳೆದ ಕೆಲ ದಿನಗಳಿಂದ ಆಹಾರ ತ್ಯಜಿಸಿತ್ತು ಎಂದು ಡಾ. ಅತುಲ್ ಗುಪ್ತಾ ಮಾಹಿತಿ ನೀಡಿದ್ದಾರೆ. ಅದರ ದೇಹವನ್ನು ಅಧ್ಯಯನಕ್ಕಾಗಿ ಜಬಲ್ಪುರದ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಆರೋಗ್ಯ ಕೆಂದ್ರಕ್ಕೆ ಕಳುಹಿಸಿಕೊಡಲಾಗುವುದೆಂದು ಅವರು ತಿಳಿಸಿದರು.
೨೦೦೬ರಲ್ಲಿ ೧೯ ವರ್ಷದ ಬಬ್ಲೂ ವನ್ನು ರಾಜಸ್ಥಾನದ ಕರಡಿ ಕುಣಿಸುವವರಿಂದ ಕಾಪಾಡಿ ಕರಡಿಧಾಮಕ್ಕೆ ಕರೆತರಲಾಗಿತ್ತು. ಸಾಮಾನ್ಯವಾಗಿ ಕರಡಿಗಳು ೨೫ರಿಂದ ೩೦ ವರ್ಷಗಳ ಆಯಸ್ಸು ಹೊಂದಿದ್ದು, ಪ್ರಾಣಿ ಸಂಗ್ರಹಾಲಯದಲ್ಲಿ ಕೊಂಚ ದೀರ್ಘಾವದಿ ಬದುಕುತ್ತವೆ.
ಎರಡು ವರ್ಷದ ಹಿಂದೆ ಇದೇ ವನವಿಹಾರದಲ್ಲಿ ಗುಲಾಬೋ ಎಂಬ ೪೦ ವರ್ಷದ ಹೆಣ್ಣು ಕರಡಿ ಸಾವನ್ನಪ್ಪಿತ್ತು.
ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…
ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…
ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ 85 ಫ್ಲೈಟ್ಗಳು ರದ್ದಾಗಿವೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…
ಚಿಕನ್ ಶವರ್ಮಾ ತಿಂದ 19 ವರ್ಷದ ತರುಣನೋರ್ವ ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೆಟ್ಟು ಹೋದ ಕೋಳಿ ಮಾಂಸವನ್ನು ಶವರ್ಮಾ…