Categories: ದೆಹಲಿ

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು

ನವದೆಹಲಿ: ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ 85 ಫ್ಲೈಟ್​ಗಳು ರದ್ದಾಗಿವೆ.

ಏರ್ಲೈನ್ ಸಂಸ್ಥೆ ನೀಡಿದ ಮಾಹಿತಿ ಪ್ರಕಾರ ಮ್ಯಾನೇಜ್ಮೆಂಟ್ ವರ್ಸಸ್ ಸಿಬ್ಬಂದಿ ಸಂಘರ್ಷದಿಂದಾಗಿ ಮೇ 9, ಇಂದು  ನಿನ್ನೆ ಬುಧವಾರದಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 300 ಮಂದಿ ಉದ್ಯೋಗಿಗಳು ಹೇಳದೇ ಕೇಳದೇ ರಜೆ ಹಾಕಿ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದರು.

ಅದರ ಪರಿಣಾಮವಾಗಿ ನಿನ್ನೆ ನೂರು ಫ್ಲೈಟ್ ರದ್ದಾಗಿದ್ದವು. ಇಂದೂ ಕೂಡ ಪರಿಸ್ಥಿತಿ ಮುಂದುವರಿದಿದೆ.

ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಅನ್ಯಾಯ ಆಗುತ್ತಿದೆ. ಸಿಬ್ಬಂದಿ ಮಧ್ಯೆ ತಾರತಮ್ಯತೆ ನಡೆಯುತ್ತಿದೆ. ಇವೇ ಮುಂತಾದ ಆರೋಪಗಳನ್ನು ಉದ್ಯೋಗಿಗಳು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಭಟನೆಯ ಕುರುಹಾಗಿ ಸುಮಾರು 300 ಮಂದಿ ಉದ್ಯೋಗಿಗಳು ಸಾಮೂಹಿಕವಾಗಿ ಸಿಕ್ ಲೀವ್ ಹಾಕಿದ್ದರು.

ರೀಫಂಡ್ ಸಿಗುತ್ತೆ ಎಂದ ಏರ್ಲೈನ್: ಒಂದು ವೇಳೆ ಫ್ಲೈಟ್ ರದ್ದಾಗಿದ್ದರೆ, ಅಥವಾ ಮೂರು ಗಂಟೆ ವಿಳಂಬವಾದರೆ ನಿಮ್ಮ ಟಿಕೆಟ್ ಹಣವನ್ನು ಸಂಪೂರ್ಣವಾಗಿ ರೀಫಂಡ್ ಮಾಡಬಹುದು. ಅಥವಾ ಬೇರೆ ದಿನಾಂಕಕ್ಕೆ ರೀಸ್ಕೆಡ್ಯೂಲ್ ಮಾಡಬಹುದು. ಇದಕ್ಕೆ ಯಾವ ಶುಲ್ಕ ಪಡೆಯಲಾಗುವುದಿಲ್ಲ. ಈ ಸೇವೆಗೆ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಾಟ್ಸಾಪ್ ಸಂಖ್ಯೆ (+91 6360012345) ನೀಡಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಫ್ಲೈಟ್ ರದ್ದಾಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿ. ಅಲ್ಲಿಗೆ ಹೋಗಿ ಫ್ಲೈಟ್ ರದ್ದಾಗಿದ್ದರೆ ಸುಮ್ಮನೆ ಸಮಯ ವ್ಯಯವಾದಂತಾಗುತ್ತದೆ. ಫ್ಲೈಟ್ ರದ್ದಾಗಿದ್ದರೆ ಮೆಸೇಜ್ ಬರಬಹುದು. ಮೂರು ಗಂಟೆಗೂ ಹೆಚ್ಚು ಕಾಲ ಫ್ಲೈಟ್ ವಿಳಂಬವಾಗಿದ್ದಲ್ಲಿ ನಿಮಗೆ ಬೇಕೆಂದರೆ ಫ್ಲೈಟ್ ರದ್ದು ಮಾಡಿ ಪೂರ್ಣ ಹಣವನ್ನು ರೀಫಂಡ್ ಪಡೆಯಲು ಅವಕಾಶ ಇರುತ್ತದೆ.

Ashika S

Recent Posts

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

2 hours ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

2 hours ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

3 hours ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

3 hours ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

3 hours ago