ದೆಹಲಿ: ಪ್ರತಿ ವರ್ಷ ಡಿಸೆಂಬರ್ ಬಂತು ಅಂದರೆ ಸಾಕು ಹೊಸ ವರ್ಷದ ‘ಮಾಡರ್ನ್ ಅಸ್ಟ್ರಾಲಜಿ’ಯ ಜನವರಿ ವಿಶೇಷ ಸಂಚಿಕೆ ಬಿಡುಗಡೆ ಆಗುತ್ತದೆ. ಇದರಲ್ಲಿನ ವಿಶೇಷತೆಗೆ ಜನ ಕಾಯುತ್ತಿರುತ್ತಾರೆ. ಅದಕ್ಕೆ ಕಾರಣ ಗಾಯತ್ರಿ ದೇವಿ ವಾಸುದೇವ್. ಅವರು ಅಂತಾರಾಷ್ಟ್ರೀಯ ಖ್ಯಾತಿಯ ಜ್ಯೋತಿಷಿ ಆಗಿದ್ದಂತಹ ದಿವಂಗತ ಬಿ.ವಿ.ರಾಮನ್ ಅವರ ಮಗಳು. ಹಾಗೂ ಗಾಯತ್ರಿ ದೇವಿ ಅವರೇ ಸ್ವತಃ ಜ್ಯೋತಿಷಿ. ಸದ್ಯಕ್ಕೆ ಅವರ ಸಂಪಾದಕತ್ವದಲ್ಲಿ ‘ಮಾಡರ್ನ್ ಅಸ್ಟ್ರಾಲಜಿ’ ಇಂಗ್ಲಿಷ್ ಮಾಸಿಕ ಹೊರಬರುತ್ತಿದೆ.
ಇದರಲ್ಲಿ ಗಾಯತ್ರಿ ದೇವಿಯವರೂ ಸೇರಿದಂತೆ ಜ್ಯೋತಿಷದಲ್ಲಿ ಅತಿರಥ ಮಹಾರಥ ಎನಿಸಿಕೊಂಡವರು ಲೇಖನಗಳನ್ನು ಬರೆಯುತ್ತಾರೆ. ಅದರಲ್ಲೂ ಜನವರಿ ತಿಂಗಳು ಬಂತೆಂದರೆ ಅಲ್ಲಿಂದ ಮುಂದಿನ ವರ್ಷ ರಾಷ್ಟ್ರ- ಅಂತಾರಾಷ್ಟ್ರೀಯ ಸಂಗತಿಗಳೂ ಸೇರಿದಂತೆ ನಾನಾ ವಿಚಾರಗಳ ಬಗ್ಗೆ ಭವಿಷ್ಯ ಇರುತ್ತದೆ. ಅಂದ ಹಾಗೆ ಹೊಸ ವರ್ಷದ ವಿಶೇಷ ಸಂಚಿಕೆಯಲ್ಲಿಯೇ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ದುರ್ಮರಣದ ವಿಚಾರವಾಗಿ ಹನ್ನೆರಡು ತಿಂಗಳ ಮೊದಲೇ ‘ಮಾಡರ್ನ್ ಅಸ್ಟ್ರಾಲಜಿ’ ಎಚ್ಚರಿಕೆ ನೀಡಿತ್ತು.
ಮಾಡರ್ನ್ ಅಸ್ಟ್ರಾಲಜಿ ನಿಯತಕಾಲಿಕೆ ಸಂಪಾದಕರಾದ ಗಾಯತ್ರಿ ದೇವಿ ವಾಸುದೇವ್ ಅವರು ಭಾರತ, ನರೇಂದ್ರ ಮೋದಿ, ಮುಂದಿನ ಲೋಕಸಭಾ ಚುನಾವಣೆ, ‘ಇಂಡಿಯಾ’ ಮೈತ್ರಿಕೂಟದ ಬಗೆಗಿನ ಮುಂದಿನ ವರ್ಷದ ಭವಿಷ್ಯದ ಪ್ರಮುಖಾಂಶಗಳನ್ನು ತಿಳಿಸಿದ್ದಾರೆ.
ಭಾರತದ ಪ್ರಧಾನಿ ಮೋದಿ ಅವರಿಗೆ ಈಗ ಜನ್ಮ ಜಾತಕದ ಪ್ರಕಾರ ಕುಜ ದಶೆ ಬುಧ ಭುಕ್ತಿ ನಡೆಯುತ್ತಿದೆ. ಇನ್ನು ಬಿಜೆಪಿ ಅಸ್ತಿತ್ವಕ್ಕೆ ಬಂದ ಸಮಯಕ್ಕೆ ವೃಶ್ಚಿಕ ರಾಶಿ ಆಗುತ್ತದೆ. ಮುಂದಿನ ವರ್ಷದ ಮೇ ತಿಂಗಳಲ್ಲಿ ವೃಷಭ ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಆಗ ಸಪ್ತಮದ ಪೂರ್ಣ ದೃಷ್ಟಿ ವೃಶ್ಚಿಕ ರಾಶಿ ಮೇಲೆ ಇರುತ್ತದೆ. ಆದ್ದರಿಂದ ನರೇಂದ್ರ ಮೋದಿ ಅವರ ಸ್ಥಾನ ಅಬಾಧಿತವಾಗಿ ಮುಂದುವರಿಯುತ್ತದೆ. ಆದರೆ ಅವರ ಮೇಲಿನ ವಿರೋಧಿಗಳ ಮಾತಿನ ದಾಳಿ, ಸಂಚು, ಪಿತೂರಿ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನರೇಂದ್ರ ಮೋದಿ ಅವರ ಸ್ಥಾನ ಅಬಾಧಿತವಾಗಿ ಮುಂದುವರಿಯುತ್ತದೆ. ಆದರೆ ಅವರ ಮೇಲಿನ ವಿರೋಧಿಗಳ ಮಾತಿನ ದಾಳಿ, ಸಂಚು, ಪಿತೂರಿ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಚಂದ್ರ, ಕುಜ ಗ್ರಹ ಇದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಅದಾಗಿ ಕೆಲ ಸಮಯ ತಮ್ಮ ಜವಾಬ್ದಾರಿಯನ್ನು ಮುಂದುವರಿಸುವ ಅವರು, ಆ ನಂತರ ಸ್ಥಾನ ತ್ಯಾಗವನ್ನು ಮಾಡುತ್ತಾರೆ.
ಇನ್ನು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕೆಲವು ಸೇರಿಕೊಂಡು, ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟ ಅಸ್ತಿತ್ವದಲ್ಲಿ ಬಹು ಕಾಲ ಇರುವುದಿಲ್ಲ. ಏಕೆಂದರೆ ಅದು ಅಸ್ತಿತ್ವಕ್ಕೆ ಬಂದಿದ್ದೇ ಅಮಾವಾಸ್ಯೆಯಂದು. ಯಾವುದೇ ವಿಚಾರ, ಸಂಘ- ಸಂಘಟನೆ ಇರಬಹುದು, ಕೃಷ್ಣ ಪಕ್ಷದ ಚುತುರ್ದಶಿ ಹಾಗೂ ಅಮಾವಾಸ್ಯೆಯಂದು ಆರಂಭವಾದದ್ದು ಯಶಸ್ಸು ಕಾಣುವುದಿಲ್ಲ.
ಕಾಂಗ್ರೆಸ್ ಪಕ್ಷದ ಅಸ್ತಿತ್ವವೇ ಈ ಲೋಕಸಭೆ ಚುನಾವಣೆ ನಂತರ ಕಷ್ಟಕ್ಕೆ ಸಿಲುಕಿಕೊಳ್ಳಬಹುದು. ನಾಯಕತ್ವದ ಬಿಕ್ಕಟ್ಟಿನಿಂದ ತಲ್ಲಣಿಸುವಂತೆ ಕಾಣಿಸುತ್ತದೆ. ರಾಹುಲ್ ಗಾಂಧಿ ಅವರಿಗೆ ಯಶಸ್ಸು ದೊರೆಯುವಂತೆ ಕಾಣುವುದಿಲ್ಲ. ಏಕೆಂದರೆ ಅವರ ಜನ್ಮ ಜಾತಕದಲ್ಲಿ ಸಂಪೂರ್ಣ ಯೋಗಗಳು ಅಂತ ಇಲ್ಲ. ಬರುವ ಅನುಕೂಲಗಳು ಸಹ ಭಂಗ ಆಗುವ ಲಕ್ಷಣಗಳೇ ಹೆಚ್ಚಿವೆ ಎಂದು ‘ಮಾಡರ್ನ್ ಅಸ್ಟ್ರಾಲಜಿ’ಯಲ್ಲಿ ಉಲ್ಲೇಖಿಸಲಾಗಿದೆ.