ಹೈದರಾಬಾದ್ : ಆನ್ಲೈನ್ ಟ್ರೋಲ್ ಗಳಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಅವರು ಮುಖ್ಯಮಂತ್ರಿ ಜಗನ್ ಮೋಹನ್ ಪರವಾಗಿ ಮಾತನಾಡಿದ ಕಾರಣ ವಿಪಕ್ಷ ಕಾರ್ಯಕರ್ತರು ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ ಈ ಕಾರಣ ಆನ್ಲೈನ್ ಟ್ರೋಲ್ ಗಳಿಂದ ಬೇಸತ್ತ ಮಹಿಳೆ ಸಾವಿನ ದಾರಿ ಹಿಡಿದಿದ್ದಾಳೆ ಎಂದು ಅವಳ ಮನೆಯವರು ಆರೋಪಿಸಿದ್ದಾರೆ.
ರೈಲಿಗೆ ಸಿಲುಕಿ ಗಂಭೀರವಾಗೊಇ ಗಾಯಗೊಂಡಿದ್ದ ಗೀತಾಂಜಲಿಯನ್ನು ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಆಂಧ್ರ ಸರ್ಕಾರ ಆಯೊಜಿಸಿದ್ದ ಜಮೀನು ಪಟ್ಟ ಪಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು ರಾಜ್ಯದ ಮುಖ್ಯಮಂತ್ರಿಯ ಪರವಾಗಿ ಮಾತನಾಡಿದ್ದರು, ಆ ವೀಡಿಯೋ ಎಲ್ಲಡೆ ವೈರಲ್ ಆಗಿತ್ತು ನಂತರ ಅವರನ್ನು ಕೆಟ್ಟದಾಗಿ ಟ್ರೋಲ್ ಮಾಡಿರುವದಾಗಿ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತುಷಾರ್ ದುಡಿ ಹೇಳಿದ್ದಾರೆ.
ಆಕೆಯ ಸಾವಿಗೆ ಮುಖ್ಯಮಂತ್ರಿ ಜಗನ್ ಮೋಹನ್ ಸಂತಾಪ ಸೂಚಿಸಿದ್ದಾರೆ. ನಂತರ ಆಕೆಯ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ ಹಾಗೂ 20 ಲಕ್ಷ ಪರಿಹಾರ ಧನ ನೀಡಿದ್ದಾರೆ. ಮತ್ತು ಇವರ ಸಾವಿಗೆ ಕಾರಣ ಆದವರನ್ನು ಆದಷ್ಟು ಬೇಗ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಆದರೆ ಈ ಆಕೆಯ ಸಾವಿಗೆ ವಿಪಕ್ಷ ಪಕ್ಷ ಟಿಡಿಪಿ ಒಂದು ಟ್ವಸ್ಟ್ ನೀಡಿದೆ ಆಕೆ ರೈಲಿಗೆ ಸಿಲುಕಿದ ಸಂದರ್ಭದಿಂದ ವೀಡಿಯೊ ಸರೆಹಿಡಿಯಲಾಗಿದ್ದು ಅದರಲ್ಲಿ ಇಬ್ಬರ ಸಂಭಾಷಣೆ ಕೇಳಿ ಬಂದಿದೆ ಹಾಗಾಗಿ ಆಕೆಯನ್ನು ಯಾರೋ ಅಪರಿಚಿತರಿಬ್ಬರು ಕೊಂದಿದ್ದಾರೆ ಎಂದು ಟಿಡಿಪಿ ಹೇಳಿದೆ.