ಆಂಧ್ರಪ್ರದೇಶ: ಸ್ವಾಮೀಜಿಗಳಿಗೆ ಭಕ್ತರು ವಿವಿಧ ರೀತಿಯಲ್ಲಿ ಭಕ್ತಿಯಿಂದ ನಮಿಸುವುದು, ಪೂಜಿಸುವುದನ್ನು ಕಾಣುತ್ತೇವೆ ಆದರೆ ಖಾರದ ಮೆಣಸಿನ ಪುಡಿಯಲ್ಲಿ ಅಭಿಷೇಕ ಮಾಡುವುದು ಕೇಳಿದ್ದೀರಾ ಅಂತಹ ಘಟನೆ ಆಂದ್ರ ಪ್ರದೇಶದಲ್ಲಿ ನಡೆದಿದೆ.
ಆಂದ್ರದ ಏಲೂರು ಜಿಲ್ಲೆಯ ದ್ವಾರಕಾತಿರುಮಲ ಮಂಡಲದ ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ವೃದ್ಧಾಶ್ರಮದಲ್ಲಿ ತಪಸ್ಸು ಕಾರ್ಯಕ್ರಮ ನಡೆಯಿತು. ಈ ವೇಳೆ ಗ್ರಾಮಸ್ಥರು ಮತ್ತು ಭಕ್ತರು ಪ್ರತ್ಯಂಗಾರಿ ದೇವಿಯ ಆರಾಧಕರಾದ ಶಿವ ಸ್ವಾಮೀಜಿಗೆ ಖಾರದ ಪುಡಿಯಿಂದ ಅಭಿಷೇಕ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಮೊದಲು ಶಿವ ಸ್ವಾಮೀಜಿಗೆ ಪ್ರತ್ಯಂಗಾರಿ ದೇವಿ ಪೂರ್ಣಾಹುತಿ ಹೋಮ ನೆರವೇರಿಸಿದರು. ಬಳಿಕ ಪ್ರತ್ಯಂಗರಾ ದೇವಿಯನ್ನು ಆವಾಹನೆ ಮಾಡಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ದೇವಿಗೆ ಆವಾಹನೆ ಮಾಡುತ್ತಿದ್ದ ಸ್ವಾಮೀಜಿಗೆ ಭಕ್ತರು ಭಾರೀ ಪ್ರಮಾಣದ ಖಾರದ ಪುಡಿಯಿಂದ ಅಭಿಷೇಕ ಮಾಡಿದರು. ಸುಮಾರು 60 ಕೆ.ಜಿ ಮೆಣಸಿನಕಾಯಿ ಪುಡಿಯಿಂದ ಸ್ವಾಮೀಜಿಗೆ ಅಭಿಷೇಕ ಮಾಡಿದರು. ಕವರ್ ಗಳಲ್ಲಿ ತಂದಿದ್ದ ಮೆಣಸಿನಕಾಯಿಪುಡಿಯನ್ನು ಅಭಿಷೇಕಕ್ಕೆ ಸುರಿದರು.
ನರಸಿಂಹಸ್ವಾಮಿ ಹಿರಣ್ಯಕಶಿಪುನನ್ನು ಕೊಂದ ನಂತರ ಸ್ವಾಮಿಯ ಕೋಪವನ್ನು ಕಡಿಮೆ ಮಾಡಲು ಪ್ರತ್ಯಂಗಾರಿ ದೇವಿಯು ಕಾಣಿಸಿಕೊಂಡಳು ಎಂದು ಪುರಾಣಗಳು ಹೇಳುತ್ತವೆ. ಆದರೆ ಪ್ರತ್ಯಂಗಿರಿ ದೇವಿಗೆ ಕೆಂಪು ಮೆಣಸಿನಕಾಯಿ ಎಂದರೆ ತುಂಬಾ ಇಷ್ಟ. ಅಲ್ಲದೆ ಪ್ರತ್ಯಂಗಿರಿ ದೇವಿಗೆ ಕೊರಳಿಗೆ ಕೆಂಪು ಮೆಣಸಿನಕಾಯಿ ಮಾಲೆ ಹಾಕಿ ಪೂಜಿಸಲಾಗುತ್ತದೆ.
ಪ್ರತ್ಯಂಗಿರಿಯ ಆವಾಹನೆ ಮಾಡುವ ಶಿವ ಸ್ವಾಮೀಜಿಗೆ ಕೆಂಪುಮೆಣಸಿನಕಾಯಿ ಹಾರ, ಖಾತದ ಪುಡಿಯಿಂದ ಅಭಿಷೇಕ ಮಾಡಿದರೆ ಸಂಕಷ್ಟ-ಕಷ್ಟಗಳು ನಿವಾರಣೆಯಾಗುತ್ತದೆ, ಶತ್ರು ಸಂಹಾರವಾಗುತ್ತದೆ, ಲಕ್ಷ್ಮೀ ಕಟಾಕ್ಷ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮೆಣಸಿನಕಾಯಿಯನ್ನು ದೇವಿಗೆ ಪ್ರಿಯವಾದ ನೈವೇದ್ಯವಾಗಿ ಬಳಸುತ್ತಾರೆ.