ಶ್ರೀಹರಿಕೋಟ: ಶ್ರೀಹರಿಕೋಟದಿಂದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಆದಿತ್ಯ ಎಲ್ 1 ನೌಕೆ ಉಡ್ಡಯನ ಯಶಸ್ವಿಯಾಗಿದ್ದು, ಸಹಸ್ರ ಸಂಖ್ಯೆ ಭಾರತೀಯರ ಮಹತ್ವದ ಕನಸು ನನಸಾಗಿದೆ. ಶ್ರೀಹರಿಕೋಟದಿಂದ ಇಸ್ರೋದ PSLV-C57 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಯಿತು. 1 ಮತ್ತು 2 ನೇ ಹಂತದಲ್ಲಿ 3 ನೇ, 4 ನೇ ಹಂತದಲ್ಲಿ ಹಂತದಲ್ಲಿ ಯಶಸ್ವಿಯಾಗಿ ರಾಕೆಟ್ನಿಂದ ಬೇರ್ಪಟ್ಟ ನೌಕೆ ತನ್ನ ಪಥದಲ್ಲಿ ಸರ್ಮಪಕವಾಗಿ ಸಾಗಿದೆ.
ಪಿಎಸ್ಎಲ್ವಿ ರಾಕೆಟ್ನ ಉಡಾವಣೆಯ ಮಹತ್ವದ ಕ್ಷಣದಲ್ಲಿಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಇಸ್ರೋದ ವಿಜ್ಞಾನಿಗಳು ಜತೆಯಾದರು. ಆದಿತ್ಯ ಎಲ್1 ಅನ್ನು ಹಲವಾರು ಹಂತಗಳಲ್ಲಿ ಭೂಮಿಯ ಕಕ್ಷೆಯಿಂದ ಹೊರಕ್ಕೆ ತೆಗೆದುಕೊಂಡು ಹೋಗಿ ಲ್ಯಾಗ್ರೇಂಜ್ 1ರಲ್ಲಿ ಸ್ಥಾಪಿಸಲಾಗುತ್ತದೆ.
ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದರೆ ಸುಮಾರು 15 ಲಕ್ಷ ಕಿಲೋ ಮೀಟರ್ ದೂರ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಆದಿತ್ಯ-ಎಲ್ 1 ಪಾತ್ರವಾಗಲಿದೆ.
ಭೂಮಿಯಿಂದ ಹೊರಟ ಆದಿತ್ಯ-ಎಲ್1 ಗಗನ ನೌಕೆಯು ಬರೋಬ್ಬರಿ 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1 ಗೆ ಸೇರುವ ನಿರೀಕ್ಷೆ ಇದೆ. ಇನ್ನು ಸುಮಾರು 400 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.