ಆಂದ್ರಪ್ರದೇಶ: ವರ್ಷದಿಂದ ವರ್ಷಕ್ಕೆ ಹೊಸತನ್ನು ತರೋ ಹಬ್ಬ ಸಂಕ್ರಾಂತಿ. ಹಳ್ಳಿ ಇರಲಿ,ದಿಲ್ಲಿ ಇರಲಿ, ಎಲ್ಲೆಡೆ ಸುಗ್ಗಿಹಬ್ಬದ ಸಂಭ್ರಮ ಕಳೆಗಟ್ಟಿದೆ. ಸಂಕ್ರಾಂತಿಗೆ ಮತ್ತೂ ಒಂದು ವಿಶೇಷ ಅಲ್ಲಿ ಮನೆ ಮಾಡಿರುತ್ತದೆ. ಹೊಸ ಅಳಿಯನಿಗೆ ಸಕಲ ಸೇವೆಗಳು ನಡೆಯುವ ಆ ಸಂಭ್ರಮ ನೋಡಲು ಬಲು ಚೆನ್ನಾಗಿರುತ್ತದೆ.
ಅನಕಾಪಲ್ಲಿ ಸಗಟು ಅಕ್ಕಿ ವ್ಯಾಪಾರಿ ಗೂಂಡಾ ಸಾಯಿ ಗೋಪಾಲ್ ರಾವ್ ಅವರ ಪುತ್ರಿ ರಿಷಿತಾ ಕಳೆದ ಡಿಸೆಂಬರ್ನಲ್ಲಿ ವಿಶಾಖಪಟ್ಟಣ ಎಸ್ಎಲ್ವಿ ಜ್ಯುವೆಲ್ಲರಿ ಮುಖ್ಯಸ್ಥ ದೇವೇಂದ್ರನಾಥ್ ಅವರನ್ನು ಮದುವೆಯಾಗಿದ್ದರು. ಮೊದಲ ಹಬ್ಬಕ್ಕೆ ನವವಿವಾಹಿತರನ್ನು ಅತ್ತೆ ಮನೆಯವರು ಆಹ್ವಾನಿಸಿದ್ದರು. ಹೊಸ ಅಳಿಯನಿಗೆ ರಾಜ ಮರ್ಯಾದೆ ಸಹಜವಾದರೂ ತಮ್ಮದೇ ಶೈಲಿಯಲ್ಲಿ ಬಗೆಬಗೆಯ ಅಡುಗೆಗಳನ್ನು ತಯಾರಿಸಿದ್ದಾರೆ.
ಅಳಿಯಯ್ಯ ಮನೆಯೊಳಕ್ಕೆ ಪ್ರವೇಶಿಸಿದಾಗ ಡೈನಿಂಗ್ ಟೇಬಲ್ ಮೇಲೆ ವಿರಾಟ ಸ್ವರೂಪದ ಅಡುಗೆಗಳು ಉಣ ಬಡಿಸಿದ್ದಾರೆ. ಆಂಧ್ರಪ್ರದೇಶದ ಎಲ್ಲಾ ಪ್ರಸಿದ್ಧ ಭಕ್ಷ್ಯಗಳನ್ನು ಜೋಡಿಸಿದ್ದರು.
ಚಕ್ಕುಲಿ ಕೋಡುಬಳೆಗಳಿಂದ ಹಿಡಿದು ಅನ್ನ, ಸೇಮ್ಯಾ, ಗುಲಾಬ್ ಜಾಮೂನ್, ಜಹಾಂಗೀರ್, ಜಿಲೇಬಿ, ಮಡಚಿದ ಕಾಜು, ಮಲೈಕಾ, ರಸಗುಲ್ಲ, ಪೂತರೇಕುಲು, ಸೋನಪಪಿಡಿ, ಗರೇಲು, ಬೋಂಡಾ ವಡೆ, ನಾನಾ ಲಡ್ಡುಗಳು, ಬೇಸಿನ್ ಲಡ್ಡುಗಳು.. ಚಕ್ಕುಲಿ ಹೀಗೆ ಖಾದ್ಯಗಳನ್ನು ಜೋಡಿಸಲಾಗಿತ್ತು. ದ್ರಾ
ಇನ್ನು ತಂಪು ಪಾನೀಯದ ವಿಷಯಕ್ಕೆ ಬಂದರೆ ಫ್ರೂಟಿಯಿಂದ ಕೋಕಾ ಕೋಲಾದವರೆಗೆ ಹೊಸ ಅಳಿಯನಿಗೆ ಕೋರಿದಂತಹ ರೀತಿ-ನೀತಿಗಳ ರುಚಿಯನ್ನು ನೀಡಲಾಯಿತು. . ಹೊಸ ಅಳಿಯನಿಗೆ ಅತ್ತೆ ಮನೆಯವರು ಒಟ್ಟು 300 ಬಗೆಯ ಅಡುಗೆಗಳನ್ನು ನೀಡಿ ಸತ್ಕರಿಸಿದರು. .