News Karnataka Kannada
Thursday, May 02 2024
ಆಂಧ್ರಪ್ರದೇಶ

ಇಂದು ಆಂಧ್ರ ಪ್ರದೇಶದ ಸಂಪುಟ ಪುನಾರಚನೆ ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ!

Jagan Mohan Reddy
Photo Credit :

ಆಂಧ್ರ ಪ್ರದೇಶ:  ಇಂದು ಬೆಳಿಗ್ಗೆ 11.30 ರ ಸುಮಾರಿಗೆ ಆಂಧ್ರ ಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಪರಿಷ್ಕೃತ ಸಚಿವ ಸಂಪುಟದ ನೂತನ ಸಚಿವರು ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ಪರಿಷ್ಕೃತ ಆಂಧ್ರ ಪ್ರದೇಶ ಸಂಪುಟದಲ್ಲಿ 14 ಮಂದಿ ಹೊಸ ಮುಖಗಳಿದ್ದು, ಹಿಂದಿನ ಕ್ಯಾಬಿನೆಟ್‌ನಲ್ಲಿದ್ದ 11 ಸಚಿವರನ್ನು ಉಳಿಸಿಕೊಳ್ಳಲಾಗುವುದು ಎನ್ನಾಗಿದೆ.

ಎಲ್ಲಾ 24 ಸಚಿವರು ಏಪ್ರಿಲ್ 7 ರಂದು ಮುಖ್ಯಮಂತ್ರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು, ಅವರಿಗೆ ಸಂಪುಟವನ್ನು ಪುನರ್ರಚಿಸಲು ಅನುವು ಮಾಡಿಕೊಡಲಾಯಿತು. ಫೆಬ್ರವರಿಯಲ್ಲಿ ಮೇಕಪತಿ ಗೌತಮ್ ರೆಡ್ಡಿ ಅವರ ನಿಧನದಿಂದಾಗಿ ಒಂದು ಸ್ಥಾನ ಖಾಲಿಯಾಗಿತ್ತು.

ನೂತನ ಸಚಿವ ಸಂಪುಟದಲ್ಲಿ ಬೊತ್ಸಾ ಸತ್ಯನಾರಾಯಣ, ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ನಾರಾಯಣಸ್ವಾಮಿ, ಬುಗ್ಗನ ರಾಜೇಂದ್ರನಾಥ್, ಗುಮ್ಮನೂರು ಜಯರಾಂ, ಸಿದಿರಿ ಅಪ್ಪಲರಾಜು, ಪಿನಿಪೆ ವಿಶ್ವರೂಪಂ, ಚೆಲುಬೋಯಿನ ವೇಣುಗೋಪಾಲಕೃಷ್ಣ, ತಾನೇಟಿ ವನಿತಾ, ಅಮ್ಜದ್ ಬಾಷಾ, ಆದಿಮಳುಪು ಸುರೇಶ್ 11 ಮಂದಿ ಸಚಿವರಾಗಿ ಮುಂದುವರಿಯಲಿದ್ದಾರೆ.

ನೂತನ ಸಚಿವರಾಗಿ ಧರ್ಮಣ್ಣ ಪ್ರಸಾದ ರಾವ್, ಪಿ ರಾಜಣ್ಣ ದೊರ, ಗುಡಿವಾಡ ಅಮರನಾಥ್, ಬುಡ್ಡಿ ಮುತ್ಯಾಲ ನಾಯ್ಡು, ದಾಡಿಶೆಟ್ಟಿ ರಾಜಾ, ಕರುಮುರಿ ನಾಗೇಶ್ವರರಾವ್, ಕಿಟ್ಟು ಸತ್ಯನಾರಾಯಣ, ಜೋಗಿ ರಮೇಶ್, ಅಂಬಟಿ ರಾಂಬಾಬು, ಮೇರಗಾ ನಾಗಾರ್ಜುನ, ವಿಡದಾಳ ರಜಿನಿ, ಕಾಕಣಿ ಗೋವರ್ಧನರೆಡ್ಡಿ, ರೋಜಾ ಕೆ ಸೆಲ್ವಮಣಿ, ಉಷಾ ಶ್ರೀಚರಣಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು