ನವದೆಹಲಿ: ಇಂಡಿಯಾ ಟುಡೇ ಮಹಿಳಾ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದ ಎಲ್ಲಾ ಐವರು ಆರೋಪಿಗಳನ್ನು ದೆಹಲಿಯ ಸಾಕೇತ್ ಕೋರ್ಟ್ ದೋಷಿ ಎಂದು ಇಂದು(ಅ.18) ಘೋಷಿಸಿದೆ. ಅಕ್ಟೋಬರ್ 26ರಂದು ಎಲ್ಲಾ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಣೆಯಾಗಲಿದೆ. 2008ರ ಸೆಪ್ಟೆಂಬರ್ 30ರಂದು ಅಂದರೆ 15 ವರ್ಷಗಳ ಹಿಂದೆ ಸೌಮ್ಯ ತನ್ನ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಚಲಿಸುತ್ತಿದ್ದ ಕಾರಿನಲ್ಲಿ ಗುಂಡು ಹಾರಿಸಲಾಯಿತು.
ಅಂದು ಸೌಮ್ಯ ವಿಶ್ವನಾಥನ್ (25) ಮಧ್ಯಾಹ್ನ 3 ಗಂಟೆಗೆ ವಿಡಿಯೋಕಾನ್ ಟವರ್ನಲ್ಲಿರುವ ತನ್ನ ಕಚೇರಿಯಿಂದ ವಸಂತ್ ಕುಂಜ್ನಲ್ಲಿರುವ ತನ್ನ ಮನೆಗೆ ತೆರಳಿದ್ದರು. ಅದೇ ಸಮಯದಲ್ಲಿ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜೀತ್ ಮಲಿಕ್ ಮತ್ತು ಅಜಯ್ ಭೈಂಗ ಕೂಡ ಅಲ್ಲಿಂದ ತಮ್ಮ ಕಾರಿನಲ್ಲಿ ತೆರಳಿ ಸೌಮ್ಯಳ ಕಾರನ್ನು ತಡೆಯಲು ಯತ್ನಿಸಿದ್ದಾರೆ. ಇದು ಸಾದ್ಯವಾಗದೇ ಇದ್ದಾಗ ರವಿ ತನ್ನ ಪಿಸ್ತೂಲಿನಿಂದ ಸೌಮ್ಯಾ ಮೇಲೆ ಗುಂಡು ಹಾರಿಸಿದ್ದ. ಈ ಪ್ರಕರಣದ ಸತತ ತನಿಖೆ ಬಳಿಕ ಇದೀಗ ಸಾಕೇತ್ ಕೋರ್ಟ್ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದ್ದಾರೆ.