ಸತತ ಐದನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಇಂದು ಪ್ರಶಸ್ತಿ ವಿಜೇತ ನಗರಗಳ ಹೆಸರನ್ನು ಘೋಷಿಸಿದ್ದು, ಇಂದೋರ್ ಈ ಬಾರಿಯೂ ಸ್ವಚ್ಛ ನಗರಿ ಪಟ್ಟ ಅಲಂಕರಿಸಿದೆ.
ಸೂರತ್ ಎರಡದೇ ಸ್ಥಾನ ಅಲಂಕರಿಸಿದರೆ, ವಿಜಯವಾಡ ಮೂರನೇ ಸ್ಥಾನ ಅಲಂಕರಿಸಿದೆ. ಈ ಬಾರಿ ಸ್ವಚ್ಛ ನಗರಿ ಪಟ್ಟಕ್ಕೇರುವ ಮೈಸೂರಿನ ಕನಸು ನನಸಾಗಲಿಲ್ಲ.
ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛ ರಾಜ್ಯಗಳ ಸರ್ವೆಯಲ್ಲಿ ಛತ್ತೀಸಗಢ ಮೊದಲ ಸ್ಥಾನ ಪಡೆದಿದೆ. ಗಂಗಾ ನದಿ ಪಾತ್ರದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಾರಣಾಸಿ ಮೊದಲ ಸ್ಥಾನ ಪಡೆದಿದೆ.
President Ram Nath Kovind confers Indore the cleanest city award for the 5th consecutive year, at Swachh Survekshan Awards 2021 pic.twitter.com/hTqUFrdVY4
— ANI (@ANI) November 20, 2021