ಮಂಗಳಮುಖಿಯರಿಗೆ ಟಾಟಾ ಸ್ಟೀಲ್ ನೀಡಿದೆ ಉದ್ಯೋಗ ಅವಕಾಶ

ಸಿಗ್ನಲ್‌ಗಳಲ್ಲಿ ಹಣ ಕೇಳುವ ಮಂಗಳಮುಖಿಯರು ಒಂದೆಡೆಯಾದರೆ, ಕೆಲಸ ಸಿಕ್ಕರೆ ದುಡಿದು ತಿನ್ನುತ್ತೇವೆ ಎನ್ನುವ ಹಲವು ಮಂಗಳಮುಖಿಯರಿದ್ದಾರೆ. ಇಂಥವರಿಗಾಗಿ ಟಾಟಾ ಸ್ಟೀಲ್ ಉದ್ಯೋಗ ಅವಕಾಶ ನೀಡಿದೆ. ಈ ಕೆಲಸ ಕೇವಲ ಮಂಗಳಮುಖಿಯರಿಗೆ ಮಾತ್ರ ಮೀಸಲಿಡಲಾಗಿದೆ.

ಭೂಮಿಗೆ ಸಂಬಂಧಿಸಿದ ವಸ್ತುಗಳನ್ನು ಯಂತ್ರೋಪಕರಣ ಬಳಸಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವ ಕೆಲಸಕ್ಕಾಗಿ ಟಾಟಾ ಸ್ಟೀಲ್ ಮಂಗಳಮುಖಿಯರಿಗೆ ಆಹ್ವಾನ ನೀಡಿದೆ. ಭಾರತೀಯ ಉಕ್ಕಿನ ದೈತ್ಯ ಕಂಪನಿ ಟಾಟಾ ಸ್ಟೀಲ್ ತನ್ನ ಪಶ್ಚಿಮ ಬೊಕಾರೊ ವಿಭಾಗದಲ್ಲಿ ಹೆವಿ ಅರ್ಥ್ ಮೂವಿಂಗ್ ಮಶಿನರಿ ಆಪರೇಟರ್ ಪಾತ್ರಗಳಿಗಾಗಿ ಟ್ರಾನ್ಸ್‌ಜೆಂಡರ್‌ಗಳಿಂದ ಮಾತ್ರ ಅರ್ಜಿಯನ್ನು ಕೋರಿದೆ.

ಟಾಟಾ ಸ್ಟೀಲ್ ಇಂಡಿಯಾ ಕೆಲಸದಲ್ಲಿ ಎಲ್ಲರಿಗೂ ಸಮಾನತೆ ಇರಲಿ ಎನ್ನುವ ಕಾರಣಕ್ಕೆ ಟ್ರಾನ್ಸ್‌ಜೆಂಡರ್‌ಗಳಿಗೆ ಮಾತ್ರ ಆಪರೇಟರ್ ಟ್ರೇನಿ ಕೆಲಸಕ್ಕೆ ಆಹ್ವಾನ ನೀಡಿದೆ. ಇದರಲ್ಲಿ ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಮಂಗಳಮುಖಿಯರಿಗೆ ರೆಸ್ಯೂಮ್ ಕಳಿಸುವಂತೆ ಕಂಪನಿ ಹೇಳಿದೆ.

ಕೆಲಸ ಪಡೆಯಲು ಮೆಟ್ರಿಕ್ಯುಲೇಶನ್ ಉತ್ತೀರ್ಣರಾಗಿರಬೇಕು. ಜೊತೆಗೆ ಸೆ,1 1981ರಿಂದ ಸೆ.1 2003ರ ನಡುವೆ ಜನಿಸಿರಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಮೊದಲು ಲಿಖಿತ ಪರೀಕ್ಷೆ ಮಾಡಲಾಗುವುದು. ನಂತರ ಸಂದರ್ಶನ, ಪ್ರಾಯೋಗಿಕ ದೃಷ್ಟಿಕೋನ ಪರೀಕ್ಷೆ ಮಾಡಲಾಗುವುದು. ಇದೆಲ್ಲದರಲ್ಲೂ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಕಂಪನಿ ಹೇಳಿದೆ.

Sneha Gowda

Recent Posts

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

8 mins ago

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…

36 mins ago

ಕಾರ್ಕಳ ಜ್ಞಾನಸುಧಾ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…

41 mins ago

ಸಲ್ಮಾನ್‌ ಖಾನ್‌ ʼಸಿಕಂದರ್‌ʼಗೆ ರಶ್ಮಿಕಾ ಮಂದಣ್ಣ ನಾಯಕಿ

ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…

54 mins ago

ಇಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ 85 ವಿಮಾನ ಹಾರಾಟ ರದ್ದು

ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಯ 85 ಫ್ಲೈಟ್​ಗಳು ರದ್ದಾಗಿವೆ.

1 hour ago

ಅಯೋಧ್ಯಾದಲ್ಲಿ ಬಾಲರಾಮನಿಗೆ ತಲೆಬಾಗಿ ನಮಿಸಿದ ರಾಜ್ಯಪಾಲ ಆರಿಫ್‌ ಮೊಹಮ್ಮದ್

ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್  ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…

1 hour ago