ಸಿಗ್ನಲ್ಗಳಲ್ಲಿ ಹಣ ಕೇಳುವ ಮಂಗಳಮುಖಿಯರು ಒಂದೆಡೆಯಾದರೆ, ಕೆಲಸ ಸಿಕ್ಕರೆ ದುಡಿದು ತಿನ್ನುತ್ತೇವೆ ಎನ್ನುವ ಹಲವು ಮಂಗಳಮುಖಿಯರಿದ್ದಾರೆ. ಇಂಥವರಿಗಾಗಿ ಟಾಟಾ ಸ್ಟೀಲ್ ಉದ್ಯೋಗ ಅವಕಾಶ ನೀಡಿದೆ. ಈ ಕೆಲಸ ಕೇವಲ ಮಂಗಳಮುಖಿಯರಿಗೆ ಮಾತ್ರ ಮೀಸಲಿಡಲಾಗಿದೆ.
ಭೂಮಿಗೆ ಸಂಬಂಧಿಸಿದ ವಸ್ತುಗಳನ್ನು ಯಂತ್ರೋಪಕರಣ ಬಳಸಿ ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವ ಕೆಲಸಕ್ಕಾಗಿ ಟಾಟಾ ಸ್ಟೀಲ್ ಮಂಗಳಮುಖಿಯರಿಗೆ ಆಹ್ವಾನ ನೀಡಿದೆ. ಭಾರತೀಯ ಉಕ್ಕಿನ ದೈತ್ಯ ಕಂಪನಿ ಟಾಟಾ ಸ್ಟೀಲ್ ತನ್ನ ಪಶ್ಚಿಮ ಬೊಕಾರೊ ವಿಭಾಗದಲ್ಲಿ ಹೆವಿ ಅರ್ಥ್ ಮೂವಿಂಗ್ ಮಶಿನರಿ ಆಪರೇಟರ್ ಪಾತ್ರಗಳಿಗಾಗಿ ಟ್ರಾನ್ಸ್ಜೆಂಡರ್ಗಳಿಂದ ಮಾತ್ರ ಅರ್ಜಿಯನ್ನು ಕೋರಿದೆ.
ಟಾಟಾ ಸ್ಟೀಲ್ ಇಂಡಿಯಾ ಕೆಲಸದಲ್ಲಿ ಎಲ್ಲರಿಗೂ ಸಮಾನತೆ ಇರಲಿ ಎನ್ನುವ ಕಾರಣಕ್ಕೆ ಟ್ರಾನ್ಸ್ಜೆಂಡರ್ಗಳಿಗೆ ಮಾತ್ರ ಆಪರೇಟರ್ ಟ್ರೇನಿ ಕೆಲಸಕ್ಕೆ ಆಹ್ವಾನ ನೀಡಿದೆ. ಇದರಲ್ಲಿ ಲೆಸ್ಬಿಯನ್, ಗೇ, ಬೈಸೆಕ್ಷುಯಲ್, ಮಂಗಳಮುಖಿಯರಿಗೆ ರೆಸ್ಯೂಮ್ ಕಳಿಸುವಂತೆ ಕಂಪನಿ ಹೇಳಿದೆ.
ಕೆಲಸ ಪಡೆಯಲು ಮೆಟ್ರಿಕ್ಯುಲೇಶನ್ ಉತ್ತೀರ್ಣರಾಗಿರಬೇಕು. ಜೊತೆಗೆ ಸೆ,1 1981ರಿಂದ ಸೆ.1 2003ರ ನಡುವೆ ಜನಿಸಿರಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಮೊದಲು ಲಿಖಿತ ಪರೀಕ್ಷೆ ಮಾಡಲಾಗುವುದು. ನಂತರ ಸಂದರ್ಶನ, ಪ್ರಾಯೋಗಿಕ ದೃಷ್ಟಿಕೋನ ಪರೀಕ್ಷೆ ಮಾಡಲಾಗುವುದು. ಇದೆಲ್ಲದರಲ್ಲೂ ಉತ್ತೀರ್ಣರಾದವರಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುವುದು ಎಂದು ಕಂಪನಿ ಹೇಳಿದೆ.
ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ.
ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…
ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…
ಕನ್ನಡದ ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣದ ಸಿನಿಮಾಗಳ ಬಳಿಕ ಬಿಟೌನ್ ನಲ್ಲಿ ಅದೃಷ್ಟ ಖುಲಾಯಿಸಿದೆ. ರಣ್ಬೀರ್ ಕಪೂರ್ ಅವರ 'ಅನಿಮಲ್'…
ಇಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯ 85 ಫ್ಲೈಟ್ಗಳು ರದ್ದಾಗಿವೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ…