ನವದೆಹಲಿ: ಭಾರತ ದೇಶದಲ್ಲಿ ಅಪ್ರತಿಮ ಪ್ರತಿಭೆಗಳಿದ್ದು, ಕೆಲವರು ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಮಗೆ ಗೊತ್ತಿರುವ ಅದ್ಭುತ ಪ್ರತಿಭೆಗಳನ್ನು ಪದ್ಮ ಪ್ರಶಸ್ತಿಗೆ ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಕೇಳಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿ ಬರೆದುಕೊಂಡಿರುವ ಮೋದಿ, ಭಾರತ ದೇಶದಲ್ಲಿ ತೆರೆ ಮರೆಯಲ್ಲಿ ಅದ್ಭುತ ಕೆಲಸಗಳನ್ನು ಮಾಡುತ್ತಿರುವ ಅಪ್ರತಿಮ ಸಾಧಕರಿದ್ದಾರೆ. ನಿಮಗೆ ಅಂತವಹವರು ಗೊತ್ತಿದ್ದಾರೆ? ಅಂತವರನ್ನು ಪದ್ಮ ಪ್ರಶಸ್ತಿಗೆ ನಾಮಿಮೇಟ್ ಮಾಡಬಹುದು. ಸೆಪ್ಟೆಂಬರ್ 15ರ ವರೆಗೆ ನಾಮಿನೇಶನ್ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.
ಪದ್ಮ ವಿಭೂಷಣ(ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ), ಪದ್ಮ ಭೂಷಣ( ಉನ್ನತ ಶ್ರೇಣಿಯ ಸೇವೆ), ಪದ್ಮಶ್ರೀ(ವಿಶಿಷ್ಟ ಸೇವೆ). ಈ ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ.