ಕೋರೊನಾ ಎರಡನೇ ಅಲೆ ಸಂದರ್ಭದಲ್ಲಿ ಆಮ್ಲಜನಕಕ್ಕಾಗಿ ತತ್ವಾರವಾಗಿದ್ದೇ ಸಾವು-ನೋವಿನ ಸಂಖ್ಯೆ ಹೆಚ್ಚುವುದಕ್ಕೆ ಪ್ರಮುಖ ಕಾರಣವಾಗಿತ್ತು.
ಇದೀಗ ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ವಿ ಕೆ ಪೌಲ್ ಹೇಳಿರುವ ಪ್ರಕಾರ “ಒತ್ತಡವನ್ನು ಪಯೋಗಿಸಿ ಗಾಳಿಯಿಂದ ಆಮ್ಲಜನಕ ಪ್ರತ್ಯೇಕಿಸಿ ಕೊಡುವ ವ್ಯವಸ್ಥೆಯಾಧಾರಿತ 1,200 ಘಟಕಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಯಾವ ಜಿಲ್ಲೆಯಲ್ಲೂ ಇಂಥದೊಂದು ಘಟಕ ಇಲ್ಲ ಎಂಬುದಿಲ್ಲ” ಎಂದಿದ್ದಾರೆ.
ಸರ್ಕಾರದ ಪರ ಅವರು ನೀಡಿರುವ ಸಿದ್ಧತೆಯ ಅಂಕಿಅಂಶಗಳು ಹೀಗಿವೆ. ಮೂರನೇ ಅಲೆ ಬರುತ್ತದೆ ಎಂದೇನೂ ಖಚಿತತೆ ಇಲ್ಲವಾದರೂ ಈ ಕುರಿತಂತೆ ಆಸ್ಪತ್ರೆ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.
ದಿನಕ್ಕೆ 5 ಲಕ್ಷದವರೆಗೆ ಕೋವಿಡ್ ಪ್ರಕರಣಗಳು ಬಂದರೂ ನಿಭಾಯಿಸುವಂಥ ವ್ಯವಸ್ಥೆ ಇದೆ. 8.36 ಲಕ್ಷ ಹಾಸಿಗೆಗಳು, 9,69,885 ಪ್ರತ್ಯೇಕ ಹಾಸಿಗೆಗಳು, 4.86 ಲಕ್ಷ ಆಮ್ಲಜನಕಯುಕ್ತ ಹಾಸಿಗೆಗಳು, 1.35 ಲಕ್ಷ ತೀವ್ರ ನಿಗಾಘಟಕದ ಹಾಸಿಗೆಗಳು ಲಭ್ಯ ಇವೆ.