ಸಿಖ್ ಧರ್ಮಗುರು ಗುರುನಾನಕ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಪಾಕಿಸ್ತಾನದಲ್ಲಿರುವ ಕರ್ತಾರ್ ಪುರ ಕಾರಿಡಾರ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಕರ್ತಾರ್ ಪುರದಲ್ಲಿರುವ ಸಾಹಿಬ್ ಗುರುದ್ವಾರಕ್ಕೆ ಭಾರತೀಯ ಯಾತ್ರಾರ್ಥಿಗಳು ಭೇಟಿ ನೀಡಲಿದ್ದು, ಅವರಿಗೆ ವೀಸಾ ಮುಕ್ತ ಗಡಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ನ.17ರಿಂದ 26ರವರೆಗೆ ಪಾಕಿಸ್ತಾನ ಸರ್ಕಾರ ಕೂಡ ಭಾರತೀಯ ಯಾತ್ರಿಕರಿಗೆ ಗಡಿ ದಾಟಲು ಅವಕಾಶ ಕಲ್ಪಿಸಲಾಗಿದೆ.
ಈ ನಿರ್ಧಾರವು ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ಸಾಹಿಬ್ ಗುರುದ್ವಾರ, ಶ್ರೀ ಪಂಜಾ ಸಾಹಿಬ್, ಡೇರಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ ಸಾಹಿಬ್ ಗುರುದ್ವಾರ ಸಚ್ಚಾ ಸೌಧಕ್ಕೆ ಭೇಟಿ ನೀಡಲು ಸಹಾಯವಾಗಲಿದೆ. ಕೇಂದ್ರ ಸರ್ಕಾರ ಅಟ್ಟಾರಿ-ವಾಘಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಸುಮಾರು 1500 ಯಾತ್ರಾರ್ಥಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿ ನೀಡಿದೆ.