ಕೇರಳ ಹಾಗೂ ಪಶ್ಚಿಮ ಬಂಗಾಳದಿಂದ ಖಾಲಿ ಇರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ನ.29ರಂದು ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಪಶ್ಚಿಮ ಬಂಗಾಳದ ರಾಜ್ಯಸಭಾ ಸದಸ್ಯೆ ಟಿಎಂಸಿಯ ಅರ್ಪಿತಾ ಘೋಷ್ ಹಾಗೂ ಕೇರಳದ ಕಾಂಗ್ರೆಸ್ (ಎಂ) ನಾಯಕ ಜೋಸೆ ಕೆ. ಮಣಿ ಅವರ ರಾಜೀನಾಮೆಯಿಂದ ಖಾಲಿಯಾಗಿರುವ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
2024ಕ್ಕೆ ಮುಕ್ತಾಯವಾಗಬೇಕಿದ್ದ ರಾಜ್ಯಸಭಾ ಸ್ಥಾನಕ್ಕೆ ಕೇರಳದ ಮಣಿ 2021ರ ಜನವರಿ 11 ರಂದು ರಾಜೀನಾಮೆ ಸಲ್ಲಿಸಿದ್ದರು. ಸೆ.15 2021ರಂದು ಅರ್ಪಿತಾ ರಾಜೀನಾಮೆ ನೀಡಿದ್ದು, 2026ಕ್ಕೆ ಇವರ ಅವಧಿ ಮುಕ್ತಾರವಾಗಬೇಕಿತ್ತು.
ಹಾಗಾಗಿ ಈ ಎರಡೂ ಕ್ಷೇತ್ರದ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧಾರ ಕೈಗೊಂಡಿದ್ದು, ನ.9ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ನ.16ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿರಲಿದೆ.