Bengaluru 27°C
Ad

ಘೋರ ದುರಂತ : ಮೀಥೇನ್ ಅನಿಲ ಸೋರಿಕೆಯಾಗಿ 11 ಮಂದಿ ಸಾವು!

Gas

ಕ್ವೆಟ್ಟಾ : ಬಲೂಚಿಸ್ತಾನದ ಕ್ವೆಟ್ಟಾದಿಂದ 50 ಕಿ.ಮೀ ದೂರದಲ್ಲಿರುವ ಸಂಜ್ದಿ ಪ್ರದೇಶದ ಕಲ್ಲಿದ್ದಲು ಗಣಿಯೊಳಗೆ ಮೀಥೇನ್ ಅನಿಲ ಸೋರಿಕೆಯಿಂದ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಡಾನ್ ವರದಿ ಮಾಡಿದೆ.

Ad
300x250 2

ಈ ಘಟನೆಯಲ್ಲಿ ಒಂಬತ್ತು ಕಲ್ಲಿದ್ದಲು ಗಣಿ ಕಾರ್ಮಿಕರು, ಕಲ್ಲಿದ್ದಲು ಕಂಪನಿ ವ್ಯವಸ್ಥಾಪಕ ಮತ್ತು ಗುತ್ತಿಗೆದಾರ ಸಾವನ್ನಪ್ಪಿದ್ದಾರೆ.

ಕಲ್ಲಿದ್ದಲು ಗಣಿ ಕಾರ್ಮಿಕರು ಗಣಿಯಲ್ಲಿ ಸುಮಾರು 1,500 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಅನಿಲ ಸ್ಫೋಟಗೊಂಡಿದೆ. ಪರಿಣಾಮ ಎಲ್ಲಾ ಕಲ್ಲಿದ್ದಲು ಗಣಿ ಕಾರ್ಮಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ” ಎಂದು ಬಲೂಚಿಸ್ತಾನದ ಗಣಿಗಳ ಮುಖ್ಯ ಇನ್ಸ್ಪೆಕ್ಟರ್ ಅಬ್ದುಲ್ ಘನಿ ಶಹ್ವಾನಿ ಡಾನ್ಗೆ ತಿಳಿಸಿದ್ದಾರೆ.

Ad
Ad
Nk Channel Final 21 09 2023
Ad