ನ್ಯೂಯಾರ್ಕ್ : ‘ಮ್ಯಾನ್ಮಾರ್ನಲ್ಲಿ ವರ್ಷದ ನಡೆದ ಸೇನಾದಂಗೆ ಬಳಿಕ 15,000ಕ್ಕೂ ಅಧಿಕ ಜನರು ಮ್ಯಾನ್ಮಾರ್ನಿಂದ ಗಡಿದಾಟಿ ಭಾರತವನ್ನು ಪ್ರವೇಶಿಸಿದ್ದಾರೆ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಥೈಲ್ಯಾಂಡ್, ಚೀನಾ, ಭಾರತದ ಗಡಿಗೆ ಹೊಂದಿಕೊಂಡಂತೆ ಬಹುತೇಕ ಕಡೆ ಶಸ್ತ್ರಸಜ್ಜಿತ ಘರ್ಷಣೆಗಳು ನಡೆದಿವೆ. ಮ್ಯಾನ್ಮಾರ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಪ್ರಾದೇಶಿಕ ವಲಯದಲ್ಲೂ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆಗೆ ವರದಿ ನೀಡಿದ್ದಾರೆ.
‘ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಮುಸಲ್ಮಾನರು ಮತ್ತು ಇತರೆ ಅಲ್ಪಸಂಖ್ಯಾತರ ಸ್ಥಿತಿ’ ಶೀರ್ಷಿಕೆ ಕುರಿತ ವರದಿಯಲ್ಲಿ ಅವರು, ಫೆ.1ಕ್ಕೂ ಮುನ್ನ ಮ್ಯಾನ್ಮಾರ್ನ ಬಿಕ್ಕಟ್ಟು ಬಾಧಿತ ಪ್ರದೇಶಗಳಿಂದ 3,36,000ಕ್ಕೂ ಹೆಚ್ಚು ಜನ ಹೊರಹೋಗಿದ್ದರು ಎಂದಿದ್ದಾರೆ.