ಚೆನ್ನೈ: ಸಮಾಜ ಸುಧಾರಕ ಪೆರಿಯಾರ್ ಪ್ರತಿಮೆ ಭಗ್ನಗೊಳಿಸಿರುವ ಪ್ರಕರಣದಲ್ಲಿ ಸಿಆರ್ಪಿಎಫ್ ಯೋಧನನ್ನು ಬಂಧಿಸಲಾಗಿದೆ. ಯೋಧ ಸ್ವಗ್ರಾಮಕ್ಕೆ ಬಂದಾಗ ಈ ಕೃತ್ಯವನ್ನು ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತ ಯೋಧ ಸೆಂಥಿಲ್ ಕುಮಾರ್ ಚಂಡಿಗಡದಲ್ಲಿ ಕರ್ತವ್ಯದಲ್ಲಿದ್ದ. ಈ ಘಟನೆ ನಡೆದ ಸ್ಥಳದಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯೋಧ ಪ್ರತಿಮೆ ಭಗ್ನಗೊಳಿಸಿರುವುದು ತಿಳಿದು ಬಂದಿದೆ.