News Karnataka Kannada
Monday, April 29 2024
ವಿದೇಶ

ಶ್ರಿಲಂಕಾಗೆ ನೆರವಿನ ಹಸ್ತ ಚಾಚಿದ ಭಾರತ: 3.3 ಟನ್‌ ವೈದ್ಯಕೀಯ ಸರಬರಾಜು ಹಸ್ತಾಂತರ

Srilanka
Photo Credit :

ಶ್ರಿಲಂಕಾ: ʼನೆರೆಹೊರೆ ಮೊದಲುʼ ಎಂಬ ಭಾರತದ ವಿದೇಶಾಂಗ ನೀತಿಗೆ ಅನುಗುಣವಾಗಿ ನೆರೆಯ ರಾಷ್ಟ್ರ ಶ್ರಿಲಂಕಾಗೆ ಭಾರತ ನೆರವಿನ ಹಸ್ತ ಚಾಚಿದೆ.

ಶ್ರೀಲಂಕಾದ ಸುವಾಸೇರಿಯಾ ಆಂಬ್ಯುಲೆನ್ಸ್ ಸೇವೆಗೆ ಅಗತ್ಯವಿರುವ ಸುಮಾರು 3.3ಟನ್‌ ಔಷಧಿಗಳು, ಉಪಕರಣಗಳನ್ನೊಳಗೊಂಡ ವೈದ್ಯಕೀಯ ಸರಬರಾಜನ್ನು ಕೋಲಂಬೋದ ಭಾರತದ ಹೈಕಮಿಷನರ್‌ ಗೋಪಾಲ್‌ ಬಾಗ್ಲೆ ಹಸ್ತಾಂತರಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತ ಸಹಾಯ ಮಾಡಿದೆ.

ಮಾರ್ಚ್‌ ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ‌ ಭೇಟಿ ನೀಡಿದಾಗ ವೈದ್ಯಕೀಯ ಸರಬರಾಜುಗಳ ಕೊರತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ 3.3ಟನ್‌ ವೈದ್ಯಕೀಯ ಸರಬರಾಜನ್ನು ಭಾರತದ ನೌಕಾಸೇನೆಯ ಐಎನ್‌ಎಸ್‌ ಘರಿಯಲ್‌ ಮೂಲಕ ಕಳುಹಿಸಿಕೊಡಲಾಗಿದ್ದು ಪ್ರಸ್ತುತ ಅದನ್ನು ಕೋಲಂಬೋದಲ್ಲಿರುವ ಭಾರತೀಯ ಹೈ ಕಮಿಷನ್‌ ವತಿಯಿಂದ ಹಸ್ತಾಂತರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು