ಕೇರಳ: ಶಬರಿಮಲೆ ವಿಚಾರದಲ್ಲಿ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ರೆಹೆನಾ ಫಾತಿಮಾ ಶುಕ್ರವಾರ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಫೇಸ್ ಬುಕ್ ನಲ್ಲಿ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ ಮೇರೆಗೆ ಸೆಪ್ಟೆಂಬರ್ 30ರಂದು ಬಂಧಿಸಲಾಗಿತ್ತು.
ಈಕೆ ಅಯ್ಯಪ್ಪ ವೃತಧಾರಿಯಾಗಿ ಬಟ್ಟೆ ತೊಟ್ಟು ‘ತತ್ವಮಸಿ’ ಎಂಬ ಅಡಿಬರಹವನ್ನು ನೀಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಅದಲ್ಲದೆ ಅಕ್ಟೋಬರ್ 19ರಂದು ಫಾತಿಮಾ ಸೇರಿ ಪತ್ರಕರ್ತೆಯೊಬ್ಬರು ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರು.