ಅಸ್ಸಾಂ: ಜಮೀನಿನ ಅಳವಡಿಸಿದ ವಿದ್ಯುತ್ ಬೇಲಿಯನ್ನು ಸ್ಪರ್ಶಿಸಿದ್ದರಿಂದ ಎರಡು ಹೆಣ್ಣಾನೆಗಳು ಸಾವನಪ್ಪಿರುವ ಘಟನೆ ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ನಡೆದಿದೆ.
ಬೆಳೆಗಳ ರಕ್ಷಣೆಗಾಗಿ ಗ್ರಾಮಸ್ಥರು ದಾರಿಯಲ್ಲಿ ತಮ್ಮ ಜಮೀನಿನ ಸತ್ತ ಅಳವಡಿಸಿದ್ದ ವಿದ್ಯುತ್ ಬೇಲಿ ಗಮನಿಸದೆ ಆಹಾರವನ್ನು ಹುಡುಕುತ್ತಾ ಬಂದಿದ್ದ 2 ಆನೆಗಳು ವಿದ್ಯುತ್ ಬೇಲಿಯನ್ನು ಮುಟ್ಟಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟರೆ ಎಂದು ಹೇಳಲಾಗುತ್ತದೆ.
ಆನೆಗಳ ಕಳೆಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅವುಗಳ ಸಾವಿನ ನಿಜವಾದ ಕಾರಣವನ್ನು ತನಿಖೆ ಮಾಡಲು ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಯಾವುದಾದರೂ ವಂಚನೆ ಕಂಡುಬಂದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕ್ರಮಕೈಗೊಳ್ಳಲಾಗುವುದು ಎಂದು ಶಿವಸಾಗರ್ ಅರಣ್ಯ ಸಹಾಯಕ ರಕ್ಷಣಾಧಿಕಾರಿ ಚಂಪಕ್ ದೇಕಾ ತಿಳಿಸಿದರು.