Categories: ವಿದೇಶ

ಲಷ್ಕರ್‌ ಉಗ್ರರನ್ನು ತಾಲಿಬಾನಿಗಳಿಗೆ ಬೆಂಬಲ ನೀಡಲು ಕಳಿಸಿದ್ದ ಪಾಕಿಸ್ಥಾನದ ಹೀನ ಕೃತ್ಯ ಬಯಲು

ನವದೆಹಲಿ: ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಅವರನ್ನು ಸಾಕಿಕೊಂಡಿರುವ ಪಾಕಿಸ್ಥಾನದ ಇನ್ನೊಂದು ಹೀನ ಕೃತ್ಯ ಬಯಲಾಗಿದೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರವನ್ನು ಮರಳಿ ಪಡೆಯಲು ತರಬೇತಿ ಪಡೆದ ಉಗ್ರರನ್ನು ತಾಲಿಬಾನ್‌ ನೆರವಿಗೆ ಪಾಕಿಸ್ತಾನ ಸೇನೆಯು ಕಳುಹಿಸಿಕೊಟ್ಟಿರುವುದು ಬೆಳಕಿಗೆ ಬಂದಿದೆ.
ಲಷ್ಕರ್‌–ಎ–ತಯ್ಬಾ ಉಗ್ರ ಸಂಘಟನೆಯ ಶಿಬಿರಗಳಲ್ಲಿ ತರಬೇತಿ ಪಡೆದ, ಪಂಜಾಬ್‌ನ ಅನೇಕರನ್ನು ಪಾಕಿಸ್ತಾನ ಸೇನೆಯು ತಾಲಿಬಾನ್ ನೆರವಿಗೆ ಕಳುಹಿಸಿಕೊಟ್ಟಿತ್ತು ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಪಂಜಾಬ್ ಪ್ರಾಂತ್ಯವು ಪಾಕಿಸ್ತಾನ ಸೇನೆ ಬೆಂಬಲಿತ ಲಷ್ಕರ್‌–ಎ–ತಯ್ಬಾ ಮತ್ತು ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಗಳ ತವರಾಗಿದೆ ಎಂದು ವರದಿ ಉಲ್ಲೇಖಿಸಿದೆ. ಪಂಜಾಬ್‌ನ ಉಗ್ರರಲ್ಲಿ ಹೆಚ್ಚಿನವರು ಲಷ್ಕರ್‌ನವರಾಗಿದ್ದಾರೆ. ವಿವಿಧ ಅಂದಾಜುಗಳ ಪ್ರಕಾರ ಇವರ ಒಟ್ಟು ಸಂಖ್ಯೆ ಸುಮಾರು 10,000 ಇರಬಹುದು ಎನ್ನಲಾಗಿದೆ.
ಕಂದಹಾರ್‌ನಲ್ಲಿ ತಾಲಿಬಾನ್‌ ಉಗ್ರರ ಜತೆ ಲಷ್ಕರ್ ಉಗ್ರರೂ ಕಾಣಿಸಿಕೊಂಡಿದ್ದಾರೆ. ಸಂಘರ್ಷದಲ್ಲಿ ಹಲವಾರು ಲಷ್ಕರ್ ಉಗ್ರರೂ ಮೃತಪಟ್ಟಿದ್ದಾರೆ. ಕಂದಹಾರ್‌ನ ನವಾಹಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಂಘರ್ಷದಲ್ಲಿ ಸೈಫುಲ್ಲಾ ಖಾಲಿದ್ ಸೇರಿದಂತೆ ಆತನ ನೇತೃತ್ವದ ಲಷ್ಕರ್ ತಂಡದಲ್ಲಿದ್ದ 11 ಮಂದಿ ಮೃತಪಟ್ಟಿದ್ದರು. ಪಂಜಾಬ್‌ನ ಲಷ್ಕರ್ ಕಮಾಂಡರ್ ಇಮ್ರಾನ್ ಬದಲಿಗೆ ಖಾಲಿದ್‌ನನ್ನು ನೇಮಕ ಮಾಡಲಾಗಿತ್ತು. ಇಮ್ರಾನ್ ಈ ಹಿಂದೆ ಕಾಶ್ಮೀರದಲ್ಲಿಯೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ವರದಿಯಲ್ಲಿ ಹೇಳಲಾಗಿದೆ.
ಹತ್ಯೆಗೀಡಾದ ಉಗ್ರರ ಮೃತದೇಹಗಳನ್ನು ಅವರ ತವರಿಗೆ ಸಾಗಿಸಲೂ ಪಾಕಿಸ್ತಾನ ವ್ಯವಸ್ಥೆ ಮಾಡಿತ್ತು. ಗಾಯಗೊಂಡ ಲಷ್ಕರ್ ಉಗ್ರರ ಚಿಕಿತ್ಸೆಗಾಗಿ ಪಾಕಿಸ್ತಾನವು ಅಫ್ಗಾನಿಸ್ತಾನದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನೂ ನಿರ್ಮಿಸಿತ್ತು ಎಂದೂ ವರದಿ ಹೇಳಿದೆ.

Indresh KC

Recent Posts

ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ

ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

18 mins ago

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

29 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

44 mins ago

ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ…

58 mins ago

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

59 mins ago

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

1 hour ago