News Karnataka Kannada
Saturday, May 18 2024
ವಿದೇಶ

ರಾಷ್ಟ್ರರಾಜಧಾನಿಯಲ್ಲಿ ಹಂತಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭ: ಅರವಿಂದ್ ಕೇಜ್ರಿವಾಲ್

Photo Credit :

ರಾಷ್ಟ್ರರಾಜಧಾನಿಯಲ್ಲಿ ಹಂತಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭ: ಅರವಿಂದ್ ಕೇಜ್ರಿವಾಲ್

ನವದೆಹಲಿ : ಎರಡನೇ ಅಲೆ ಕೊರೋನಾ ಸೋಂಕಿಗೆ ಹರದುವಿಕಿಯಿಂದ ತತ್ತರಿಸಿ ಹೋಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಂತ ಹಂತವಾಗಿ ಅನ್​ಲಾಕ್​ ಪ್ರಕ್ರಿಯೆ ಆರಂಭವಾಗಿದೆ. 

 

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮ- ಬೆಸ ಸಂಖ್ಯೆ ಆಧಾರದ ಮೇಲೆ ಮಾರ್ಕೆಟ್​ ಮತ್ತು ಮಾಲ್​ಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದಿದ್ದಾರೆ. ಅಲ್ಲದೇ, ಶೇ 50 ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಮೆಟ್ರೋ ಚಾಲನೆಗೆ ಸೋಮವಾರದಿಂದ ಅವಕಾಶ ನೀಡಲಾಗಿದೆ.

 

ಖಾಸಗಿ ಕಚೇರಿಗಳು ಕೂಡ ಶೇ 50ಕ್ಕೂ ಹೆಚ್ಚಿಲ್ಲದ ಸಾಮರ್ಥ್ಯದ ಆಧಾರದ ಮೇಲೆ ಸಿಬ್ಬಂದಿಗಳನ್ನು ಕಚೇರಿಗೆ ಕರೆದುಕೊಳ್ಳಬಹುದು. ಸರ್ಕಾರಿ ಕಚೇರಿಯಲ್ಲಿ 100ರಷ್ಟು ಸಾಮರ್ಥ್ಯದ ಆಧಾರದ ಮೇಲೆ ಕೆಲಸ ನಿರ್ವಹಿಸಬಹುದು ಎಂದಿದ್ದು, ಗ್ರೂಪ್​ ಬಿ ವರ್ಷಕ್ಕೆ ಮಾತ್ರ ಶೇ 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಿದ್ದಾರೆ.

 

ಕಳೆದವಾರವಷ್ಟೇ ಈ ಕುರಿತು ತಿಳಿಸಿದ್ದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ತಜ್ಞರ ಅಭಿಪ್ರಾಯದಂತೆ ಹಂತಹಂತವಾಗಿ ಲಾಕ್​ಡೌನ್​ ಸಡಿಲ ಮಾಡಲಾಗುವುದು ಎಂದಿದ್ದರು. ಮೊದಲ ಹಂತದಲ್ಲಿ ಅವರು ಕಟ್ಟಡ ಕಾರ್ಮಿಕ ಸೇರಿ ಬಡ ಕುಟುಂಬದ ಜೀವನ ನಿರ್ವಹಣೆಗೆ ಸಹಾಯವಾಗುವಂತೆ ಅನ್​ಲಾಕ್​ ಪ್ರಕ್ರಿಯೆ ನಡೆಸಿದ್ದರು. ಈಗ ಎರಡನೇ ಹಂತದ ಅನ್​ಲಾಕ್​ ಪ್ರಕ್ರಿಯೆಗೆ ಅವರು ಹಸಿರು ನಿಶಾನೆ ತೋರಿದ್ದಾರೆ. ಆದರೂ ಕೂಡ ಕೆಲವು ನಿರ್ಬಂಧಗಳು ಮುಂದುವರೆಯಲಿದ್ದು, ಜೂನ್​ 14ರವರೆಗೆ ಲಾಕ್​ಡೌನ್​ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು