ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕೇರಳ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ ಗರ್ ಮತ್ತು ಇತರ ರಾಜ್ಯದ ಜನರಿಗೆ ರಾಜ್ಯ ದಿನಾಚರಣೆಯ ಶುಭಾಶಯವನ್ನು ಕೋರಿದರು.
‘ಕರ್ನಾಟಕ ರಾಜ್ಯದ ಎಲ್ಲಾ ನನ್ನ ಸಹೋದರ ಸಹೋದರಿಯರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ಜನತೆಯ ಸಾಮರ್ಥ್ಯ ಮತ್ತು ಕೌಶಲ್ಯದಿಂದ ಕರ್ನಾಟಕ ರಾಜ್ಯವು ಅಭಿವೃದ್ಧಿ ಯ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಆ ರಾಜ್ಯದ ಎಲ್ಲಾ ಜನರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಆ ದೇವರು ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಆಂಧ್ರಪ್ರದೇಶದ ಜನರಿಗೆ ಶುಭಾಶಯ ಕೋರುತ್ತಾ ಮೋದಿಯವರು” ಆಂಧ್ರಪ್ರದೇಶವು ಕಠಿಣ ಪರಿಶ್ರಮ ಮತ್ತು ಸಹಾನುಭೂತಿಯ ಪದಕ್ಕೆ ಅರ್ಥ ಕಲ್ಪಸಿದಂತ ರಾಜ್ಯವಾಗಿದೆ. ಆಂಧ್ರಪ್ರದೇಶಕ್ಕೆ ಸೇರಿದ ಜನರು ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಇನ್ನು ಮುಂದೆಯೂ ಆ ರಾಜ್ಯದ ಜನರ ಸಮಸ್ತ ಅಭಿವೃದ್ಧಿಗೆ ನಾನು ಶುಭಾಶಯ ಕೋರುತ್ತೇನೆ’ ಎಂದರು.
‘ರಾಜ್ಯ ಸ್ಥಾಪನೆಯ ದಿನ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಸ್ಥಳವೆಂಬ ಖ್ಯಾತಿಗೆ ಕಾರಣವಾದ ಹರಿಯಾಣ ರಾಜ್ಯಕ್ಕೆ ಶುಭಾಶಯವನ್ನು ಕೋರುತ್ತಾ ” ಸಮೃದ್ಧಿ ಮತ್ತು ಅಭಿವೃದ್ಧಿಯ ಹೆಸರಲ್ಲಿ ಹೊಸ ಇತಿಹಾಸವನ್ನು ಸೃಷ್ಠಿಸಿದ ರಾಜ್ಯ ಹರಿಯಾಣ’ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿಕೊಂಡಿದ್ದಾರೆ.
‘ಛತ್ತೀಸ್ ಗರ್ ನ ಜನತೆಗೆ ರಾಜ್ಯ ರಚನೆಯ ದಿನದ ಶುಭಾಶಯ ಹೇಳುತ್ತಾ ಮೋದಿಯವರು ಧರ್ಮ ಹಾಗೂ ಅನೇಕ ರೀತಿಯ ಸಂಸ್ಕೃತಿ , ಆಚಾರವನ್ನು ಪುರಾತನ ಕಾಲದಿಂದಲೂ ಸಮೃದ್ದಿ ಮತ್ತು ಪ್ರಗತಿಯ ಹಾದಿಯಲ್ಲಿ ಇಲ್ಲಿಯವರೆಗೂ ಈ ರಾಜ್ಯದ ಜನ ವಿಸ್ತರಿಸಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.
‘ಮಧ್ಯಪ್ರದೇಶದ ಜನತೆಗೆ ರಾಜ್ಯ ರಚನೆಯ ದಿನದ ಶುಭಾಶಯಗಳು. ಈ ರಾಜ್ಯವು ಅನೇಕ ಅಭಿವೃದ್ಧಿಗೆ ಸಂಕೇತವಾದ ರಾಜ್ಯವಾಗಿದೆ. ಅಷ್ಟೇ ಅಲ್ಲದೆ ಹೊಸ ಕನಸು, ಹೊಸ ಯೋಜನೆಯಾದ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ’ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪ್ರಧಾನಿಯವರು ಈ ರಾಜ್ಯ ರಚನೆಯ ದಿನದ ಸಲುವಾಗಿ ಕೇರಳದ ಜನತೆಗೆ ಅವರ ” ಪಿರವಿ ದಿನ” ದ ಶುಭಾಶಯವನ್ನು ಕೂಡ ತಿಳಿಸಿದ್ದಾರೆ.