ನವದೆಹಲಿ: ಮಾರಕ ಕೊರೋನಾದಿಂದ ಈಗಾಗಲೇ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದು, ಇದೀಗ ಹಿರಿಯ ಪತ್ರಕರ್ತರೊಬ್ಬರು ಮತ್ತೆ ಪ್ರಾಣ ಕಳೆದುಕೊಂಡಿದ್ದಾರೆ .
ದೆಹಲಿಯಲ್ಲಿ ರಾಷ್ಟ್ರಮಟ್ಟದ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಲ್ಯಾಣ್ ಬರುವಾ ಕೊರೋನಾದಿಂದ ಮೃತಪಟ್ಟಿದ್ದಾರೆ . ಶುಕ್ರವಾರ ಅವರ ಪತ್ನಿ ಹಾಗೂ ಪತ್ರಕರ್ತೆ ನೀಲಾಕ್ಷಿ ಭಟ್ಟಾಚಾರ್ಯ ಅವರು ಕೊರೋನಾದಿಂದ ಸಾವನ್ನಪ್ಪಿದ್ದರು . ಮೂಲತಃ ಅಸ್ಸಾಂನವರಾಗಿದ್ದ ಬರುವಾ ಕಳೆದ ಹಲವು ವರ್ಷಗಳಿಂದ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು .