News Karnataka Kannada
Monday, May 13 2024
ವಿದೇಶ

ಮಾಧ್ಯಮಗಳಿಲ್ಲದೆ ಸಿಎಂ ಜತೆ ಮಾತುಕತೆ ನಡೆಸಲ್ಲ: ಮುಂದುವರೆದ ವೈದ್ಯರ ಮುಷ್ಕರ

Photo Credit :

ಮಾಧ್ಯಮಗಳಿಲ್ಲದೆ ಸಿಎಂ ಜತೆ ಮಾತುಕತೆ ನಡೆಸಲ್ಲ: ಮುಂದುವರೆದ ವೈದ್ಯರ ಮುಷ್ಕರ

ಕೊಲ್ಕತ್ತಾ: ಮಾಧ್ಯಮದ ಕ್ಯಾಮೆರಾ ಮುಂದೆಯೇ ಮುಕ್ತವಾಗಿ ವೈದ್ಯರ ಜತೆ ಚರ್ಚೆ ನಡೆಸಬೇಕೆಂದು ಹೇಳಿ ಮಮತಾ ಬ್ಯಾನರ್ಜಿ ಇಂದು 3ಗಂಟೆಗೆ ಕರೆದಿದ್ದ ಸಂಧಾನ ಸಭೆಗೆ ಎನ್ ಆರ್ ಎಸ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಕೊಲ್ಲತ್ತಾದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ 7ನೇ ದಿನಕ್ಕೆ ಕಾಲಿಟ್ಟಿದ್ದು ಹೊರ ರೋಗಿ ವಿಭಾಗವನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಮಾತುಕತೆ ನಡೆಸಲು ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರತಿ ಮೆಡಿಕಲ್ ಕಾಲೇಜಿನ ಒಬ್ಬ ಅಧಿಕಾರಿ ಭಾಗವಹಿಸುವಂತೆ ಪತ್ರ ಬರೆದಿದ್ದರು.  

ಪತ್ರದಲ್ಲಿ ‘’’ವೈದ್ಯರ ಬೇಡಿಕೆ ಬಗ್ಗೆ ಚರ್ಚೆ ನಡೆಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳೋಣ. ಪ್ರತಿ ಮೆಡಿಕಲ್ ಕಾಲೇಜಿನ ಪರವಾಗಿ ಒಬ್ಬ ಅಧಿಕಾರಿ ಸೋಮವಾರ ಮಧ್ಯಾಹ್ನ 2.30 ಹಾಜರಿರಬೇಕು’ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿದ ವೈದ್ಯರು, ಸಿಎಂ ಮಾಧ್ಯಮ ಪ್ರತಿನಿಧಿಗಳು ಹಾಗೂ ಕ್ಯಾಮರದ ಮುಂದೆಯೇ ಮುಕ್ತವಾಗಿ ಚರ್ಚೆ ನಡೆಸಲಿ. ಈಗಾಗಲೇ ಪ್ರತಿಭಟನೆಯಿಂದಾಗಿ ಹಲವು ರೋಗಿಗಳು ನೋವು ಅನುಭವಿಸುತ್ತಿದ್ದಾರೆ. ಮುಕ್ತವಾಗಿ ಚರ್ಚೆಗೆ ಬರಲಿ ಎಂದು ಮಮತಾ ಬ್ಯಾನರ್ಜಿ ಮಾತುಕತೆ ನಿರಾಕರಿಸಿದ್ದಾರೆ.

ಘಟನೆ ಹಿನ್ನೆಲೆ: ಜೂನ್ 10ರಂದು ಎನ್ ಆರ್ ಎಸ್ ಮೆಡಿಕಲ್ ಕಾಲೇಜಿನಲ್ಲಿ ಮೃತರ ಕುಟುಂಬದವರು ಚಿಕಿತ್ಸೆ ನೀಡಿದ ವೈದ್ಯರ ಮೇಲೆ ನಡೆಸಿದ್ದು, ಇದರಿಂದ ಇಬ್ಬರು ಗಾಯಗೊಂಡಿದ್ದಾರೆ.  ಇದನ್ನು ಖಂಡಿಸಿ ಹಾಗೂ ಸೂಕ್ತ ಭದ್ರತೆಯನ್ನು ಒದಗಿಸಿಕೊಡುವಂತೆ ಆಗ್ರಹಿಸಿ 7 ದಿನದಿಂದ ವೈದ್ಯರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು