News Karnataka Kannada
Monday, April 29 2024
ವಿದೇಶ

ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಠಿಣವಾಗಿದೆ : ಸಚಿವ ಡಾ.ಎಸ್.ಜೈಶಕಂಕರ್‌

India is focusing on helping Sri Lanka: Minister S Jaishankar Jaishankar
Photo Credit :

ಚೀನಾ ಗಡಿ ಒಪ್ಪಂದವನ್ನು ಉಲ್ಲಂಘಿಸಿದ ನಂತರ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಠಿಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಕಂಕರ್‌ ತಿಳಿಸಿದ್ದಾರೆ.

ಮ್ಯಚುರಿಟಿ ಸೆಕ್ಯುರಿಟಿ ಕಾನ್ಫರೆನ್ಸ್‌ ನಲ್ಲಿ ಮಾತನಾಡಿದ ಅವರು, ಕಳೆದ 45 ವರ್ಷಗಳ ಕಾಲ ಚೀನಾ ಹಾಗೂ ಭಾರತದ ಗಡಿಗಳಲ್ಲಿ ಶಾಂತಿ ನೆಲೆಸಿತ್ತು. ಆಗ ಯಾವುದೇ ಘರ್ಷಣೆ, ಸಾವು-ನೋವು ಸಂಭವಿಸಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ.

ಚೀನಾ ಗಡಿ ಒಪ್ಪಂದ ಉಲ್ಲಂಘಿಸಿದೆ. ಈಗಿರುವ ಗಡಿ ಸಮಸ್ಯೆ ಗಮನಿಸಿದರೆ ಚೀನಾದೊಂದಿಗಿನ ನಮ್ಮ ಸಂಬಂಧ ಹೇಗಿದೆ ಎಂದು ತಿಳಿಸುತ್ತದೆ ಎಂದರು.

2020ರಲ್ಲಿ ನಡೆದ ಗಾಲ್ವನ್‌ ಸಂಘರ್ಷದ ನಂತರ ಚೀನಾದೊಂದಿಗೆ ಭಾರತದ ಸಂಬಂಧ ಮತ್ತಷ್ಟು ಕ್ಷೀಣಿಸಿದೆ. ಇಂದಿನ ಕಾಲದಲ್ಲಿ ಜಗತ್ತು ಪರಸ್ಪರ ಅವಲಂಬಿತವಾಗಿದೆ. ಒಂದು ರಾಷ್ಟ್ರ ತನ್ನ ಹಿತಾಸಕ್ತಿಯನ್ನು ಬದಿಗಿಟ್ಟು ಮತ್ತೊಂದು ರಾಷ್ಟ್ರದೊಂದಿಗೆ ವ್ಯಾಪಾರ ಮಾಡುವುದು ಈಗ ಅನಿವಾರ್ಯವಾಗಿದೆ ಎಂದರು.

ಈಗ ಭಾರತದ ಸಾಮರ್ಥ್ಯ ಹಾಗೂ ಪ್ರಭಾವ ಹಲವು ವರ್ಷಗಳಲ್ಲಿ ಬೆಳೆದಿದೆ ಎಂದರು. ಜೈಶಂಕರ್ ಅವರು ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುರೋಪ್, ಏಷ್ಯಾ ಮತ್ತು ವಿಶ್ವದ ಇತರ ಭಾಗಗಳ ಮಂತ್ರಿಗಳೊಂದಿಗೆ ಸರಣಿ ಸಭೆ ನಡೆಸಿದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು