News Karnataka Kannada
Saturday, May 18 2024
ವಿದೇಶ

ಭಾರತದಲ್ಲಿ ಗಲಭೆ ಸೃಷ್ಟಿಸಲು ಹಣದ ಹೊಳೆ ಹರಿಸಿದ ಐಎಸ್ ಐ

Photo Credit :

ಭಾರತದಲ್ಲಿ ಗಲಭೆ ಸೃಷ್ಟಿಸಲು ಹಣದ ಹೊಳೆ ಹರಿಸಿದ ಐಎಸ್ ಐ

ನವದೆಹಲಿ: ಭಾರತದಲ್ಲಿ ಗಲಭೆ ಎಬ್ಬಿಸಲು ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್ ಐ) ಬಾಂಗ್ಲಾದೇಶದ ನಿರಾಶ್ರಿತ ಮುಸ್ಲಿಮರು ಮತ್ತು ರೊಹಿಂಗ್ಯಗಳಿಗೆ ಹಣ ಒದಗಿಸುತ್ತಿದೆ ಎಂದು ಗುಪ್ತಚರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.

ದೇಶದ ಕೆಲವೊಂದು ಸೂಕ್ಷ್ಮ ನಗರದಲ್ಲಿ ಕಲ್ಲು ತೂರಾಟ ನಡೆಸಲು ಐಎಸ್ ಐ ಹವಾಲ ಮೂಲಕ ಹಣ ರವಾನೆ ಮಾಡಿದೆ ಮತ್ತು ಭಾರತದಲ್ಲಿ ಗಲಭೆ ಹಾಗೂ ಅಶಾಂತಿ ಉಂಟು ಮಾಡಲು ಹಣ ನೀಡುತ್ತಿದೆ ಎಂದು ಗುಪ್ತಚರ ಇಲಾಖೆಯು ವರದಿ ಮಾಡಿದೆ.

ದೆಹಲಿಯ ಜಮಿಯಾ ನಗರ, ಸೀಲಂಪುರ ಮತ್ತು ಜಫರ್ಬಾದ್ ನಲ್ಲಿ ನಡೆದ ಗಲಭೆಗಳ ವೇಳೆಯು ಐಎಸ್ ಐ ಕೈವಾಡವು ಕಂಡುಬಂದಿದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.

ಉಗ್ರ ನಿಗ್ರಹ ದಳವು ದೇಶದೆಲ್ಲೆಡೆಯಲ್ಲಿ ಫೋನ್ ಕರೆಗಳು ಮತ್ತು ವಾಟ್ಸ್ ಆಪ್ ಗುಂಪುಗಳನ್ನು ಪರಿಶೀಲನೆ ನಡೆಸುತ್ತಿದೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು