ನವದೆಹಲಿ: ಭಾರತದಲ್ಲಿ ಗಲಭೆ ಎಬ್ಬಿಸಲು ಪಾಕಿಸ್ತಾನದ ಗುಪ್ತಚರ ಏಜೆನ್ಸಿ ಇಂಟರ್ ಸರ್ವಿಸ್ ಇಂಟೆಲಿಜೆನ್ಸ್(ಐಎಸ್ ಐ) ಬಾಂಗ್ಲಾದೇಶದ ನಿರಾಶ್ರಿತ ಮುಸ್ಲಿಮರು ಮತ್ತು ರೊಹಿಂಗ್ಯಗಳಿಗೆ ಹಣ ಒದಗಿಸುತ್ತಿದೆ ಎಂದು ಗುಪ್ತಚರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ದೇಶದ ಕೆಲವೊಂದು ಸೂಕ್ಷ್ಮ ನಗರದಲ್ಲಿ ಕಲ್ಲು ತೂರಾಟ ನಡೆಸಲು ಐಎಸ್ ಐ ಹವಾಲ ಮೂಲಕ ಹಣ ರವಾನೆ ಮಾಡಿದೆ ಮತ್ತು ಭಾರತದಲ್ಲಿ ಗಲಭೆ ಹಾಗೂ ಅಶಾಂತಿ ಉಂಟು ಮಾಡಲು ಹಣ ನೀಡುತ್ತಿದೆ ಎಂದು ಗುಪ್ತಚರ ಇಲಾಖೆಯು ವರದಿ ಮಾಡಿದೆ.
ದೆಹಲಿಯ ಜಮಿಯಾ ನಗರ, ಸೀಲಂಪುರ ಮತ್ತು ಜಫರ್ಬಾದ್ ನಲ್ಲಿ ನಡೆದ ಗಲಭೆಗಳ ವೇಳೆಯು ಐಎಸ್ ಐ ಕೈವಾಡವು ಕಂಡುಬಂದಿದೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿದೆ.
ಉಗ್ರ ನಿಗ್ರಹ ದಳವು ದೇಶದೆಲ್ಲೆಡೆಯಲ್ಲಿ ಫೋನ್ ಕರೆಗಳು ಮತ್ತು ವಾಟ್ಸ್ ಆಪ್ ಗುಂಪುಗಳನ್ನು ಪರಿಶೀಲನೆ ನಡೆಸುತ್ತಿದೆ. ಯಾವುದೇ ಸಂಶಯಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.