ನೆಲ್ಲೂರು: ಎಲ್ಲರೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಬಾಕ್ಸಿಂಗ್ ಗಳ ಮೊರೆ ಹೋಗುತ್ತಿದ್ದಾರೆ, ಸ್ವದೇಶಿ ಆಯುರ್ವೇದ ಔಷಧಿಯಲ್ಲಿ ಇದನ್ನು ಗುಣಪಡಿಸುವ ಶಕ್ತಿಯಿದೆ ಎಂದು ತೋರಿಸಿಕೊಟ್ಟ ಆಂಧ್ರಪ್ರದೇಶದ ಕೃಷ್ಣಂಪಟ್ಟಣಂನ ಆಯುರ್ವೇದ ವೈದ್ಯ ಆನಂದಯ್ಯನವರ ಕಡೆಗೆ ಎಲ್ಲರ ಗಮನ ಸಾಗುತ್ತಿದೆ.
ಇದಾಗಲೇ ಆಂಧ್ರ ಹೈಕೋರ್ಟ್ ಹಾಗೂ ಸರ್ಕಾರದಿಂದಲೂ ಈ ಕೊರೊನಾ ಔಷಧ ವಿತರಣೆಗೆ ಗ್ರೀಸ್ ಸಿಗ್ನಲ್ ಸಿಕ್ಕಿದ್ದು, ಕೃಷ್ಣಂಪಟ್ಟಣಂನತ್ತ ಜನರು ದೌದಾಡಿಸುತ್ತಿದ್ದಾರೆ. ಈ ಕಾರಣದಿಂದಾಗಿ ಇದಾಗಲೇ ಇಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ನಡುವೆಯೇ ಜೀವಬೆದರಿಕೆಯಿಂದಾಗಿ ಆನಂದಯ್ಯ ಅವರನ್ನು ಸ್ಥಳಾಂತರ ಮಾಡಲಾಗಿದ್ದು, ಅಲ್ಲಿಯೇ ಅವರು ಔಷಧ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಬೇರಿಕೆ ಹೆಚ್ಚುತ್ತಿರುವ ಕಾರಣ, ಆಂಧ್ರಪ್ರದೇಶದ ಪ್ರತಿ ಜಿಲ್ಲೆಗೂ ಆರಂಭಿಕವಾಗಿ ವಿತರಿಸಲು 5000 ಪ್ಯಾಕ್ಗಳನ್ನು ಸಿದ್ಧಪಡಿಸಿರುವ ಆನಂದಯ್ಯನವರು, ಈ ಕುರಿತು ಮುಖ್ಯಮಂತ್ರಿ ಜಗನ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.
ಇದರ ನಡುವೆಯೇ ಇವರ ಔಷಧವನ್ನು ಸ್ವಯಂಸೇವಕರು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇದು ಸದ್ಯ ಆಂಧ್ರಪ್ರದೇಶದಲ್ಲಿ ಮಾತ್ರ ನಡೆಯುತ್ತಿದೆ. ಈ ಔಷಧಕ್ಕೆ ಇಷ್ಟು ಪರಿಯಲ್ಲಿ ಡಿಮಾಂಡ್ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರದ ಸರ್ಕಾರ, ವಿವಿಧ ಭಾಗಗಳಲ್ಲಿಯೂ ಈ ಔಷಧ ಪೂರೈಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.
ಟಿಟಿಡಿ (ತಿರುಪತಿ ತಿರುಮಲ ಟ್ರಸ್ಟ್) ಮೂಲಕ ಇದನ್ನು ವಿತರಣೆ ಮಾಡಲು ಸಾಧ್ಯವೇ ಎಂದು ನೋಡುತ್ತಿದೆ. ದೇಶಾದ್ಯಂತ ಟಿಟಿಡಿಯ ಘಟಕಗಳು ಹಾಗೂ ಟಿಕೆಟ್ ಬುಕಿಂಗ್ ಕೇಂದ್ರಗಳು ಇರುವ ಹಿನ್ನೆಲೆಯಲ್ಲಿ ಇದರ ಮೂಲಕ ಪೂರೈಕೆಯ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.