News Karnataka Kannada
Monday, April 29 2024
ವಿದೇಶ

ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ

Sanjay Raut Mumbai 5 7 21
Photo Credit :

ಮುಂಬೈ : ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬಹುದೆಂಬ ಊಹೆಗಳು ಹೆಚ್ಚುತ್ತಿರುವಂತೆಯೇ, ಶಿವಸೇನೆ ನಾಯಕ ಸಂಜಯ ರಾವತ್​ ಎರಡೂ ಪಕ್ಷಗಳ ಬಂಧ ಚೆನ್ನಾಗೇ ಇದೆ ಎಂದಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ ಎಂದಿದ್ದಾರೆ!
ಇತ್ತೀಚೆಗೆ ಡೈವೋರ್ಸ್ ಪಡೆಯುವ ನಿರ್ಧಾರ ತಿಳಿಸಿದ್ದ ಆಮೀರ್​ ಖಾನ್ ಕಿರಣ್​ ರಾವ್ ದಂಪತಿ, ತಮ್ಮ ಸಂಬಂಧ ಬದಲಾದರೂ, ನಾವು ಒಂದು ಕುಟುಂಬವೇ ಆಗಿರುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ರಾವತ್​ ಅವರು ಉಪಮೆ ನೀಡಿದ್ದಾರೆ. “ನಾವು (ಶಿವಸೇನೆ, ಬಿಜೆಪಿ) ಭಾರತ-ಪಾಕಿಸ್ತಾನ ಅಲ್ಲ. ಆಮೀರ್​ ಖಾನ್​ ಮತ್ತು ಕಿರಣ್​ ರಾವ್​ರನ್ನು ನೋಡಿ, ಇದು ಅವರ ತರಹ. ನಮ್ಮ ರಾಜಕೀಯ ಮಾರ್ಗಗಳು ಬೇರೆಯಾಗಿವೆ, ಆದರೆ, ನಮ್ಮ ಸ್ನೇಹ ಹಾಗೇ ಉಳಿಯುತ್ತದೆ” ಎಂದು ರಾವತ್​ ಹೇಳಿರುವುದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರು ಈ ಮುನ್ನ ತಮ್ಮ ಪಕ್ಷಗಳು ಶತೃಗಳಲ್ಲ ಎಂದಿದ್ದಕ್ಕೆ ರಾವತ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್​ಸಿಪಿ-ಕಾಂಗ್ರೆಸ್​ ಒಕ್ಕೂಟ ಮುರಿದುಬೀಳುತ್ತಿಲ್ಲ ಎಂದಿರುವ ಶಿವಸೇನೆ ಸಂಸದ ರಾವತ್​, ಸರ್ಕಾರ ಪೂರ್ಣ ಅವಧಿಯವರೆಗೆ ನಡೆಯುವುದು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು