ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ರಾಜ್ಯದ ಜನರಿಗೆ ತಮ್ಮ ಮತಕ್ಕಾಗಿ ಹಣವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ನಮಗೆ ಯಾರಾದರೂ ಹಣವನ್ನು ನೀಡುವುದಕ್ಕೆ ಬಂದರೆ ಏನು ಮಾಡಬೇಕು ಎಂದು ಜನರು ಕೇಳುತ್ತಿದ್ದಾರೆ ಎಂದು ಬ್ಯಾನರ್ಜಿ ಉಲ್ಲೇಖಿಸಿ ಅಂತಹ ಹಣವನ್ನು ತೆಗೆದುಕೊಳ್ಳಿ ಎಂದು ಸೂಚಿಸಿದ್ದಾರೆ.
ಅಷ್ಟೇ ಅಲ್ಲದೆ, ತದನಂತರ ಮಾತನಾಡಿದ ಅವರು “ನಮ್ಮ ಸಭೆಗಳಲ್ಲಿ ಗೊಂದಲವನ್ನುಂಟುಮಾಡಲು ಕೆಲವು ಜನರನ್ನು ಬಿಜೆಪಿಯಿಂದ ಕಳುಹಿಸಲಾಗುತ್ತಿದೆ ಎಂದು ನಾನು ಕೆಲವು ದಿನಗಳಿಂದ ವಿಚಾರಗಳು ಕೇಳಿಬರುತ್ತದೆ. ಈಗ ನಾನು ಬಿಜೆಪಿ ಸಭೆಗಳಿಗೆ ತೊಂದರೆಯಾಗಲು ಕೆಲವು ಜನರನ್ನು ಕಳುಹಿಸುತ್ತೇನೆ” ಎಂದು ಹೇಳಿದರು.