News Karnataka Kannada
Thursday, May 02 2024
ವಿದೇಶ

ನಕ್ಸಲರ ದಾಳಿಗೆ ನಾಲ್ಕು ಮಂದಿ ಬಿಎಸ್ ಎಫ್ ಯೋಧರು ಬಲಿ

Photo Credit :

ನಕ್ಸಲರ ದಾಳಿಗೆ ನಾಲ್ಕು ಮಂದಿ ಬಿಎಸ್ ಎಫ್ ಯೋಧರು ಬಲಿ

ಛತ್ತೀಸಗಡ: ನಕ್ಸಲರು ನಡೆಸಿರುವ ದಾಳಿಯಲ್ಲಿ ನಾಲ್ಕು ಮಂದಿ ಗಡಿ ರಕ್ಷಣಾ ಪಡೆ(ಬಿಎಸ್ ಎಫ್)ಯ ಯೋಧರು ಬಲಿಯಾಗಿದ್ದು, ಇಬ್ಬರು ಗಾಯಗೊಂಡಿರುವ ಘಟನೆಯು ಗುರುವಾರ ಇಲ್ಲಿನ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲು ವಾರ ಬಾಕಿ ಇರುವಾಗಲೇ ಈ ಘಟನೆಯು ನಡೆದಿದೆ. ಚುನಾವಣೆ ಬಹಿಷ್ಕರಿಸುವಂತೆ ನಕ್ಸಲರು ಕರೆ ನೀಡಿದ್ದಾರೆ.

ಚುನಾವಣೆಗೆ ಮೊದಲು ರಾಜ್ಯ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಯು ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದೆ.

ರಾಜ್ಯದಲ್ಲಿನ 11 ಲೋಕಸಭಾ ಕ್ಷೇತ್ರಗಳ ಮತದಾನವು ಮೂರು ಹಂತದಲ್ಲಿ ನಡೆಯಲಿದೆ. ಎಪ್ರಿಲ್ 11, 18 ಮತ್ತು ಎಪ್ರಿಲ್ 23ರಂದು ಮತದಾನ ನಡೆಯಲಿದೆ.

ಮಾರ್ಚ್ 31ರಂದು ಮಹಿಳೆಯೊಬ್ಬರು ಸೇರಿದಂತೆ ಮೂರು ಮಂದಿ ನಕ್ಸಲರನ್ನು ಬಂಧಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು