ನವದೆಹಲಿ: ಕಡಿಮೆ ಮೌಲ್ಯದ ಆಸ್ತಿಯನ್ನು ಅಡ ಇರಿಸಿ ರಾಷ್ಟ್ರೀಕೃತ ಬ್ಯಾಂಕ್ ನಿಂದ ಭಾರೀ ಮೊತ್ತದ ಸಾಲ ಪಡೆದಿರುವ ಆರೋಪ ಕರ್ನಾಟಕದ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಕೇಳಿಬಂದಿದೆ.
ಕೇವಲ 1.10 ಕೋಟಿ ಮೌಲ್ಯದ ಜಮೀನನ್ನು ಅಡಯಿಟ್ಟು ಸಚಿವರು ಸಿಂಡಿಕೇಟ್ ಬ್ಯಾಂಕ್ನ ಉಡುಪಿ ಜಿಲ್ಲೆಯ ಮಲ್ಪೆ ಶಾಖೆಯಿಂದ 193 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಆರೋಪಿಸಿದ್ದಾರೆ.
ಈ ಕುರಿತು ಅಬ್ರಹಾಂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನ ಮುಖ್ಯಸ್ಥರಿಗೆ ದಾಖಲೆ ಸಮೇತ ಬುಧವಾರ ದೂರು ನೀಡಿದ್ದಾರೆ.
ದೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳು ಯಾವುದೇ ಆಸ್ತಿಯ ಆಧಾರದ ಮೇಲೆ ಸಾಲ ನೀಡಲು ಪ್ರಮಾಣ ನಿಗದಿಪಡಿಸಲಾಗುತ್ತದೆ. ಆದರೆ, ಸಚಿವರಿಗೆ ಇಷ್ಟೊಂದು ಪ್ರಮಾಣದ ಸಾಲ ನೀಡಲು ಹೇಗೆ ಸಾಧ್ಯಬಾಗಿದ್ದು ಎಂದು ಪ್ರಶ್ನಸಿರುವ ಅವರು ಬ್ಯಾಂಕ್ನ ವ್ಯವಸ್ಥಾಪಕರ ಸಹಕಾರವಿಲ್ಲದೆ ಭಾರಿ ಮೊತ್ತದ ಸಾಲ ಪಡೆಯಲು ಸಾಧ್ಯವಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.